ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾಸಕರನ್ನ ಖರೀದಿಸಿ ಸರ್ಕಾರ ಉರುಳಿಸ್ತಿರುವ ಬಿಜೆಪಿ ವಿರುದ್ಧ ಹೋರಾಟ ಮಾಡ್ತಿರುವ ಕಾಂಗ್ರೆಸ್, ಎಸ್.ಎಂ ಕೃಷ್ಣ ಅವರು ಸರ್ಕಾರದಲ್ಲಿ ನಮ್ಮ ಶಾಸಕರನ್ನ ಖರೀದಿಸಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಶಾಸಕರ ಖರೀದಿ ಸಂಬಂಧ ಪ್ರಜಾಪ್ರಭುತ್ವ ಉಳಿಸಿ ಎಂತಿರುವ ಕಾಂಗ್ರೆಸ್, ಈ ಹಿಂದೆ ಜೆಡಿಎಸ್ ನ್ನ ಒಡಿಯಲಿಲ್ಲವೇ? ಕೇವಲ ರಾಜ್ಯಸಭೆಗಾಗಿ 8 ಮಂದಿ ಜೆಡಿಎಸ್ ಶಾಸಕರನ್ನ ಖರೀದಿಸಲಿಲ್ಲವೇ? ಇದು ಪ್ರಜಾಸತ್ತಾತ್ಮಕವೇ ಎಂದಿರು ಹೆಚ್ಡಿಕೆ, ಖರೀದಿಯಲ್ಲಿ ಎರಡೂ ಪಕ್ಷಗಳು ಒಂದೇ ಎಂದಿದ್ದಾರೆ. ಅಲ್ದೇ, ಕುದುವೆ ವ್ಯಾಪಾರ ಅನ್ನೋ ಭಾಷೆ ಹುಟ್ಟಿದ್ದೇ ಕಾಂಗ್ರೆಸ್ ನಿಂದ ಎಂದಿದ್ದಾರೆ.