ವಿಷಕನ್ಯೆಯಿಂದ ಕಾಂಗ್ರೆಸ್ ನಲ್ಲಿ ಸಂಬಂಧ ಹಾಳು: ಜಾರಕಿಹೊಳಿ

245

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ನನ್ನ ವೈಯಕ್ತಿಕ ಬದುಕು ಹಾಗೂ ರಾಜಕೀಯ ಜೀವನ ಹಾಳು ಮಾಡಲು ಷಡ್ಯಂತ್ರ ಮಾಡಿದ್ದು ಡಿ.ಕೆ ಶಿವಕುಮಾರ್. ವಿಷಕನ್ಯೆಯಿಂದ ಕಾಂಗ್ರೆಸ್ ನಲ್ಲಿ ಸಂಬಂಧ ಹಾಳಾಯಿತು. ಡಿ.ಕೆ ಶಿವಕುಮಾರನನ್ನು ರಾಜಕೀಯವಾಗಿ ಮುಗಿಸಿಯೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಸಾಕಷ್ಟು ಸಾಕ್ಷಿಗಳಿವೆ. ಡಿ.ಕೆ ಶಿವಕುಮಾರ್ ಸಿಡಿ ಪ್ರಕರಣದ ಸೂತ್ರದಾರ. ಈ ಬಗ್ಗೆ ಆಡಿಯೋ ಬಿಡುಗಡೆ ಮಾಡುತ್ತೇನೆ. ಇದನ್ನು ಸಿಬಿಐ ತನಿಖೆಗೆ ಸರ್ಕಾರದ ಮೂಲಕ ಶಿಫಾರಸು ಮಾಡಿಸುತ್ತೇನೆ. ಇದು ವೈಯಕ್ತಿಕ ವಿಷಯ. ಇದಕ್ಕೂ ಪಕ್ಷಕ್ಕೂ ಪಕ್ಷದ ನಾಯಕರಿಗೂ ಸಂಬಂಧವಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಸಾಕಷ್ಟು ಜನರು ಹಾಳಾಗಾಲು ವಿಷಕನ್ಯೆ ಹಾಗೂ ಡಿ.ಕೆ ಶಿವಕುಮಾರ್ ಕಾರಣ. ನಾನು ನೀರಾವರಿ ಸಚಿವನಾಗಿದ್ದಾಗ ಬೆಂಗಳೂರು ಶಾಂತಿನಗರದ 10 ಸಾವಿರ ಕೋಟಿ ರೂಪಾಯಿ ಫೈಲ್ ಗೆ ಒಪ್ಪಿಗೆ ನೀಡದಿರುವುದೆ ಇಬ್ಬರ ನಡುವೆ ವೈಮನಸ್ಸಿಗೆ ಕಾರಣವಾಯಿತು. ಅಕ್ರಮ ಟೆಂಡರ್ ಗೆ ಸಹಿ ಹಾಕಲು ಡಿ.ಕೆ ಶಿವಕುಮಾರ ಗ್ಯಾಂಗ್ ಒತ್ತಡ ಹಾಕಿತ್ತು. ನಾನು ಬಿಜೆಪಿ ಸೇರಿದ್ದಕ್ಕೆ ಸಿಡಿ ಬಿಡುಗಡೆಯಾಗಲು ಪ್ರಮುಖ ಕಾರಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ.ಕೆ ಶಿವಕುಮಾರ, ಉದ್ಯಮಿ ಪರಮಶಿವಮೂರ್ತಿ, ನರೇಶ, ಶ್ರವಣ, ಶಿವಕುಮಾರ ವಾಹನ ಚಾಲಕ ಹಾಗೂ ಮಂಡ್ಯ ಮೂಲಕ ಇಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.




Leave a Reply

Your email address will not be published. Required fields are marked *

error: Content is protected !!