ಪ್ರಜಾಸ್ತ್ರ ಸುದ್ದಿ
ಮಂಡ್ಯ: ಚುನಾವಣೆ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾತ್ನಾಡಿದ್ದೇನೆ. ಸಂಸತ್ ನಲ್ಲಿಯೂ ಸಹ ಇದರ ಬಗ್ಗೆ ಧ್ವನಿ ಎತ್ತಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ ಹೇಳಿದ್ದಾರೆ. ಮನ್ಮುಲ್ ಎದುರು ನಡೆಯುತ್ತಿರುವ ಪ್ರತಿಭಟನೆ ವೇಳೆ ಅವರು ಈ ರೀತಿ ಮಾತ್ನಾಡಿದ್ದಾರೆ.
ಸುಮಲತಾ ಏನು ಮಾತ್ನಾಡಿದ್ರೂ ರಾಜಕೀಯ ಬಣ್ಣ ಹಚ್ಚುವ ಕೆಲಸ ಮಾಡಲಾಗ್ತಿದೆ. ಸುಮಲತಾಗೆ ರಾಜಕೀಯ ಹೊಸದು, ಭ್ರಷ್ಟಾಚಾರ ವಿಚಾರ ಹೊಸದು. ನಾನು ಸಿನಿಮಾ ರಂಗದಿಂದ ಬಂದವಳೆ. ಅಲ್ಲಿ ಇದೆಲ್ಲ ಇಲ್ಲವೆಂದು ಹೇಳುವ ಮೂಲಕ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಈ ವೇಳೆ ಮಾತ್ನಾಡಿದ ರೈತ ಮುಖಂಡರು, ಸಂಸದೆ ಸುಮಲತಾ ಪರವಾಗಿ ಇರುವುದಾಗಿ ಹೇಳಿದ್ರು. ಸಂಸದೆ ವಿರುದ್ಧ ತುಂಬ ಕೀಳು ಮಟ್ಟದ ಪದಗಳಿಂದ ಮಾತ್ನಾಡ್ತಿರುವ ಜೆಡಿಎಸ್ ನಾಯಕರ ವಿರುದ್ಧ ಕಿಡಿ ಕಾರಿದ್ರು.