ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್ ರ್ಯಾಲಿ ಮಾಡ್ತಿರುವ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಲ್ದೇ, ಅಶ್ರುವಾಯು ಸಿಡಿಸಿರುವ ಘಟನೆ ಸಹ ನಡೆದಿದೆ.
ದೆಹಲಿಯ ಮುಕಾರ್ಬಾ ಚೌಕ್ ಬಳಿ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ರೈತರ ಬ್ಯಾರಿಕೇಡ್ ಮುರಿಯಲು ಯತ್ನಿಸಿದ್ರು ಎಂದು ಹೇಳಿ ಲಾಠಿ ಚಾರ್ಜ್ ಮಾಡಲಾಗಿದೆ. ಜೊತೆಗೆ ಅಶ್ರುವಾಯು ಸಹ ಸಿಡಿಸಲಾಗಿದೆ.
ಇನ್ನು ಸಿಂಗು ಹಾಗೂ ಟಿಕ್ರಿ ಗಡಿ ಭಾಗದಿಂದ ಬರ್ತಿರುವ ರೈತರ ಮೇಲೂ ಲಾಠಿ ಚಾರ್ಜ್ ನಡೆಸಲಾಗಿದೆ. ರಾಜಪಥ್ ನಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆದಿದ್ಮೇಲೆ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸಲಾಗಿತ್ತು. ಅದಕ್ಕೂ ಮೊದ್ಲು ಬಂದಿದ್ದಾರೆ ಎಂದು ಹೇಳಿ ಲಾಠ ಚಾರ್ಜ್ ಮಾಡಲಾಗಿದೆ.