ಒಂದೇ ಕುಟುಂಬದ ಮೂವರ ಜೀವ ತೆಗೆದ ಸಾಲದ ಕುಣಿಕೆ

173

ಪ್ರಜಾಸ್ತ್ರ ಸುದ್ದಿ

ತಿರುವನಂತಪುರಂ: ಸಾಲದಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಘಟನೆ ಕಾಡಿನಂಕುಲಂನಲ್ಲಿ ನಡೆದಿದೆ. ತಂದೆ, ತಾಯಿ ಹಾಗೂ ಮಗಳು ಸಾವಿಗೆ ಶರಣಾಗಿದ್ದಾರೆ. ಕೆಲ ಮಾಹಿತಿ ಪ್ರಕಾರ 12 ಲಕ್ಷ ರೂಪಾಯಿ ಸಾಲದಿಂದಾಗಿ ಈ ದಾರಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ರಮೇಶ್, ಪತ್ನಿ ಸುಜತಾ ಹಾಗೂ ಮಗಳು ರೇಷ್ಮಾ ಬೆಡ್ ರೂಮಿನಲ್ಲಿ ಬೆಂಕಿ ಹಚ್ಚಿಕೊಂಡು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇವರ ಕಿರಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದಾಗ ಇಡೀ ಮನೆಗೆ ಬೆಂಕಿ ಆವರಿಸಿಕೊಂಡಿತ್ತು. ಆದರೆ ಮುಂದಿನ ಬಾಗಿಲು ತೆರೆದು ಒಳಗೆ ಹೋಗಿದ್ದಾರೆ. ಆದರೆ, ಬೆಡ್ ರೂಮಿಗೆ ಹೋಗಲು ಆಗಿಲ್ಲ. ಹೊರಗಿನಿಂದಲೇ ನೀರು ಹಾಕಿದ್ದಾರೆ. ಪ್ರಯೋಜನವಾಗಿಲ್ಲ.

ತಮ್ಮ ವಿರುದ್ಧ ಪ್ರಕರಣ ದಾಖಲಿಸಿದವರಿಗೆ ಮನೆ ಮಾರಾಟ ಮಾಡಿ ಸಾಲ ತೀರಿಸಿದ್ದರು. ಆದರೆ, ಕೈ ಸಾಲ ಮಾಡಿದವರಿಗೆ ಹೇಗಾದರೂ ಮಾಡಿ ಹಣ ನೀಡಬೇಕು ಎಂದುಕೊಂಡಿದ್ದಾರೆ. ಹೀಗಾಗಿ ಮತ್ತೆ ಬೇರೆ ಕಡೆ ಸಾಲಕ್ಕೆ ಪ್ರಯತ್ನಿಸಿದ್ದಾರೆ. ಅದು ಫಲ ನೀಡಿಲ್ಲ. ಹೀಗಾಗಿ ಸಾವಿನ ಹಾದಿ ಹಿಡಿದಿದ್ದಾರೆ.




Leave a Reply

Your email address will not be published. Required fields are marked *

error: Content is protected !!