ಭೈರಗೊಂಡ ಮೇಲೆ ಫೈರಿಂಗ್ ಕೇಸ್: ಮತ್ತೋರ್ವ ಆರೋಪಿ ಬಂಧನ

330

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಮಹಾದೇವ ಭೈರಗೊಂಡ ಎಂಬುವರ ಮೇಲೆ ನವೆಂಬರ್ 2, 2020ರಂದು ನಡೆದ ಗುಂಡಿನ ದಾಳಿ ಸಂಬಂಧ ಭಾನುವಾರ ಮತ್ತೊಬ್ಬ ಆರೋಪಿಯನ್ನ ಬಂಧಿಸಲಾಗಿದೆ. 26 ವರ್ಷದ ಸಿದ್ದೇಶ ಬಂಡಿ ಎಂಬಾತನನ್ನ ಬಂಧಿಸಲಾಗಿದೆ.

ಚಡಚಣ ಮೂಲದ ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಅನುಪಮ ಅಗರ್ವಾಲ್ ತಿಳಿಸಿದ್ದಾರೆ. ಈತನ ಬಂಧನದೊಂದಿಗೆ ಇದುವರೆಗೂ 30 ಜನರನ್ನ ಅರೆಸ್ಟ್ ಮಾಡಿದಂತಾಗಿದೆ.

ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯ ಕನ್ನಾಳ ಕ್ರಾಸ್ ಬಳಿ ನವೆಂಬರ್ 2ರಂದು ಹೊರಟಿದ್ದ ಕಾರಿನ ಮೇಲೆ ಫೈರಿಂಗ್ ನಡೆಸಲಾಗಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮಹಾದೇವ ಭೈರಗೊಂಡರನ್ನ ಚಿಕಿತ್ಸೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!