ಬ್ರೇಕಿಂಗ್ ನ್ಯೂಸ್:
ವಿಜಯಪುರ: ತಾಳಿಕೋಟೆ ಬಳಿಯ ಮಿಣಜಗಿಯ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಏಕಾಏಕಿ ನೀರು ಬಂದ ಪರಿಣಾಮ, 4ಜನ ಕುರಿಗಾಹಿಗಳು, 300 ಕುರಿ ಹಾಗೂ 4 ನಾಯಿಗಳು ಸಿಲುಕಿಕೊಂಡಿವೆ.
ಕುರಿ ಮೇಯಿಸಿಕೊಂಡು ವಾಪಸ್ ಆಗುವ ವೇಳೆ ಏಕಾಏಕಿ ನೀರು ಬಂದಿದೆ. ನೆರೆ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಫೋನ್ ಮಾಡಿದ್ದು, ಬೇಗಂ ತಲಾಬ್ ನಲ್ಲಿದ್ದ ಬೋಟ್ ತೆಗೆದುಕೊಂಡು ಜಿಲ್ಲಾ ವಿಪತ್ತು ನಿರ್ವಹಣಾ ತಂಡ ರಕ್ಷಣೆಗೆ ತೆರಳಿದೆ.
ಸಾಂದರ್ಭಿಕ ಚಿತ್ರ ಬಳಸಲಾಗಿದೆ