ಹೈದ್ರಾಬಾದ್: ಕಚೇರಿಯಲ್ಲಿಯೇ ತಹಶೀಲ್ದಾರ್ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದಲ್ಲಾಪುರಮೆಟ್ ಎಂಬಲ್ಲಿ ಈ ಕೃತ್ಯ ನಡೆದಿದೆ. ಇದ್ರಿಂದಾಗಿ ತಹಶೀಲ್ದಾರ್ ವಿಜಯಾ ರೆಡ್ಡಿ ಸಾವನ್ನಪ್ಪಿದ್ದಾರೆ.
ವಿಜಯಾ ರೆಡ್ಡಿ ಕಚೇರಿಯಲ್ಲಿ ಮಧ್ಯಾಹ್ನ ಅವರ ಕೋಣೆಗೆ ಹೋಗಿದ್ದಾನೆ. ಅವರ ಜೊತೆ ಸ್ವಲ್ಪ ಸಮಯ ಮಾತ್ನಾಡಿದ್ದಾನೆ. ಬಳಿಕ ಜೊತೆಗೆ ತಂದಿದ್ದ ಪೆಟ್ರೋಲ್ ನ್ನ ಅವರ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಕೊಠಡಿಯಿಂದ ಹೊರಗೆ ಓಡಲು ಹೋಗಿ ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅಪರಿಚಿತ ಹಂತಕ ಎಸ್ಕೇಪ್ ಆಗಿದ್ದಾನೆ.
ಜಮೀನು ಭಾಗದ ವಿಚಾರಕ್ಕೆ ಇಬ್ಬರು ನಡುವೆ ವಾಗ್ವಾದ ನಡೆದಿದೆ ಅಂತಾ ಹೇಳಲಾಗ್ತಿದೆ. ಬಳಿಕ ಆತ ಪೆಟ್ರೋಲ್ ಸುರಿದು ಈ ಕೃತ್ಯವೆಸಗಿದ್ದಾನೆ. ಸಹಾಯಕ್ಕಾಗಿ ಕೂಗಿಕೊಂಡಾಗ ಡ್ರೈವರ್ ಬರುವಷ್ಟರಲ್ಲಿ ಕೈಮೀರಿ ಹೋಗಿತ್ತು. ಈ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಗೆ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.