ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಜಿಲ್ಲೆಯ ಕುಡಿದರ್ಗದ ಎರಡು ಸೇತುವೆ ಜಲಾವೃತಗೊಂಡಿವೆ. ಇದ್ರಿಂದಾಗಿ ವಾಹನ ಸಂಚಾರ ಬಂದ್ ಆಗಿದೆ ಎಂದು ಹೇಳಲಾಗ್ತಿದೆ. ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಜೇವರ್ಗಿ, ಸಿಂದಗಿಗೆ ಕೂಡಿದರ್ಗದ ಮೂಲಕ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಕಟ್ಟಿ ಸಂಗಾವಿ ಸೇತುವೆ ಬಂದ್ ಆಗಿದೆ. ಹೀಗಾಗಿ ಕಲಬುರಗಿ, ಜೇವರ್ಗಿ, ಸಿಂದಗಿ, ಶಹಾಪೂರ ವಿಜಯಪುರ ಸಂಚಾರ ಮಾರ್ಗ ಬಂದ್ ಮಾಡಿ, ಬೇರೆ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಆದ್ರೆ, ಕೆಲವರು ತುಂಬಿ ಹರಿಯುತ್ತಿರುವ ಸೇತುವೆಯಲ್ಲಿಯೇ ಸಂಚರಿಸ್ತಿದ್ದು, ಅಪಾಯವನ್ನ ತಂದುಕೊಳ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಈ ಸೇತುವೆಯ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಕಾರ್ಯಾರಂಭ ಮಾಡಿದೆ. ಆದ್ರೆ, ಜನರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಲ್ದೇ ಹೋದ್ರೆ ಮುಂದಿನ ಅನಾಹುತಕ್ಕೆ ಯಾರು ಕಾರಣ ಅನ್ನೋ ಪ್ರಶ್ನೆ ಮೂಡಿದೆ.