ಚಿನ್ನ ಗೆದ್ದ ಕನ್ನಡದ ಕುವರಿಯರಿಗೆ ಭರ್ಜರಿ ಸ್ವಾಗತ

135

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫಡರೇಶನ್ ಆಯೋಜಿಸುವ ವಿಶ್ವ ಕ್ರೀಡಾಕೂಟದಲ್ಲಿ ಭಾರತದ ವನಿತಾ ಕ್ರಿಕೆಟ್ ಟೀಂ ಚಿನ್ನ ಗೆದ್ದಿದೆ. ಇದರಲ್ಲಿ ಕರ್ನಾಟಕದ ಮೂವರು ಆಟಗಾರ್ತಿಯರಿದ್ದಾರೆ. ಇಂದು ಬೆಂಗಳೂರಿಗೆ ವಾಪಸ್ ಆದರು.

ಕರ್ನಾಟಕ ಮೂಲದ ವರ್ಷಾ ನಾಯಕತ್ವದಲ್ಲಿ ಕ್ರಿಕೆಟ್ ತಂಡ ಚಿನ್ನ ಗೆದ್ದಿದೆ. ಹೀಗಾಗಿ ರಾಜ್ಯ, ದೇಶಕ್ಕೆ ಕೀರ್ತಿ ತಂದಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಟಗಾರ್ತಿಯರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು.

ಆಗಸ್ಟ್ 17ರಿಂದ 26ರ ತನಕ ಲಂಡನ್ ಬರ್ಮಿಂಗ್ ಹ್ಯಾಮ್ ನಲ್ಲಿ ಟೂರ್ನಿ ನಡೆದಿದೆ. ಇದರಲ್ಲಿ ಭಾರತದ ಪುರುಷರ ತಂಡ ಪಾಕ್ ಎದುರು ಸೋತು ಬೆಳ್ಳಿಗೆ ತೃಪ್ತಿ ಪಟ್ಟಿದೆ. ಯುವತಿಯರ ತಂಡ ಆಸ್ಟ್ರೇಲಿಯಾ ತಂಡ ಮಣಿಸಿ ಚಿನ್ನ ಗೆದ್ದಿದೆ.




Leave a Reply

Your email address will not be published. Required fields are marked *

error: Content is protected !!