ಪ್ರಜಾಸ್ತ್ರ ಕ್ರೀಡಾ ಸುದ್ದಿ
ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ 71 ರನ್ ಗಳ ಅಂತರದಿಂದ ಗೆಲುವು ಸಾಧಿಸಿ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ. ಇಂಗ್ಲೆಂಡ್ ಎದುರು ಸೆಮಿ ಫೈನಲ್ ಪಂದ್ಯ ಆಡಲಿದೆ.
ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಆಯ್ಕೆಯನ್ನು ಗಟ್ಟಿ ಮಾಡಿದವರು ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಸ್ಫೋಟಕ ಬ್ಯಾಟ್ಸಮನ್ ಸೂರ್ಯಕುಮಾರ್ ಯಾದವ್. ರಾಹುಲ್ 3 ಸಿಕ್ಸ್, 3 ಫೋರ್ ಗಳೊಂದಿಗೆ 51 ರನ್ ಗಳಿಸಿದರು. 4 ಸಿಕ್ಸ್, 6 ಫೋರ್ ಗಳ ಮೂಲಕ ಕೇವಲ 25 ಬೌಲ್ ಗಳಲ್ಲಿ ಅಜೇಯ 61 ರನ್ ಗಳನ್ನು ಸೂರ್ಯಕುಮಾರ್ ಗಳಿಸಿದರು.
ರೋಹಿತ್ 15, ಕೊಹ್ಲಿ 26, ಪಂಥ್ 3 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಜಿಂಬಾಬ್ವೆ ಪರ ಸೀನ್ ವಿಲಿಯಮ್ಸ್ 2 ವಿಕೆಟ್ ಪಡೆದರೆ, ರಿಚರ್ಡ್, ರಾಜ್, ಬ್ಲೆಸಿಂಗ್ ತಲಾ 1 ವಿಕೆಟ್ ಪಡೆದರು.
186 ರನ್ ಗುರಿ ಬೆನ್ನು ಹತ್ತಿದ ಜಿಂಬಾಬ್ವೆ ತಂಡ, ಭಾರತದ ಬೌಲರ್ ಗಳ ಎದುರು ಮಂಕಾಯಿತು. ರಾಯನ್ ಬರ್ಲ್ 35, ಸಿಕಂದರ್ ರಾಜ್ 34 ರನ್ ಗಳಿಸಿದೇ ಗರಿಷ್ಠ. ಉಳಿದವರು ಒಂದಂಕಿಗೆ ಔಟ್ ಆದರು. ಹೀಗಾಗಿ 17.2 ಓವರ್ ಗಳಲ್ಲಿ 115 ರನ್ ಗಳಿಗೆ ಆಲೌಟ್ ಆಯಿತು. ಭಾರತ ಪರ ಅಶ್ವಿನ್ 3, ಪಾಂಡ್ಯ, ಶಮಿ ತಲಾ 2 ಹಾಗೂ ಭುವನೇಶ್ವರ್ ಕುಮಾರ್, ಅರ್ಸದೀಪ್ ಒಂದೊಂದು ವಿಕೆಟ್ ಪಡೆದರು. ಹೀಗಾಗಿ 71 ರನ್ ಗಳ ಅಂತರದಿಂದ ಗೆದ್ದ ಭಾರತ ಸೆಮಿ ಫೈನಲ್ ಪ್ರವೇಶಿಸಿತು.