ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ವಿಮಾನ, ದಟ್ಟ ಮಂಜು ಕವಿದ ವಾತಾವರಣದಿಂದಾಗಿ ಮಂಗಳೂರಿಗೆ ಹೋಗಿ ಲ್ಯಾಂಡ್ ಆಗಿದೆ. ಇಂಡಿಗೋ ವಿಮಾನ ಶನಿವಾರ ಬೆಳಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದೆ.
ಹೀಗೆ ಬಂದ ವಿಮಾನಕ್ಕೆ ಮುಂಜಾನೆಯ ದಟ್ಟು ಮಂಜು ಲ್ಯಾಂಡಿಂಗ್ ಗೆ ಅಡಚಣೆಯಾಗಿದೆ. ಹೀಗಾಗಿ ಸುಮಾರು 20 ನಿಮಿಷಗಳ ಕಾಲ ಆಕಾಶದಲ್ಲಿಯೇ ಸುತ್ತಾಡಿದೆ. ಈ ವೇಳೆ ಎಟಿಎಸ್ ನಿಂದ ಸಿಗ್ನಲ್ ಸಿಗದ ಕಾರಣ, ಮಾರ್ಗ ಬದಲಿಸಿ ಮಂಗಳೂರಿಗೆ ಹೋಗಿ ಲ್ಯಾಂಡ್ ಆಗಿದೆ. ಈ ವಿಮಾನದಲ್ಲಿ 65 ಜನ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.