ಇದೇ 28ರಂದು ತಮ್ಮ ವೃತ್ತಿ ಬದುಕಿಗೆ ರಾಜೀನಾಮೆ ನೀಡಿದ ಕರ್ನಾಟಕದ ಸಿಂಗಂ ಖ್ಯಾತಿಯ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಜೀವನಾಧರಿತ ಸಿನ್ಮಾ ತೆರೆಗೆ ಬರಲು ಸಿದ್ಧತೆ ನಡೆದಿದೆ ಎನ್ನಲಾಗ್ತಿದೆ. ಚಿತ್ರದ ಟೈಟಲ್ ರಿಜಿಸ್ಟರ್ ಮಾಡುವ ಕೆಲಸ ಸಧ್ಯದ್ಲಲಿಯೇ ಆಗಲಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ಟೈಟಲ್ ರಿಜಿಸ್ಟರ್ ಮಾಡುವ ಕೋರಿತು ಪೊಲೀಸ್ ಅಧಿಕಾರಿಯೊಬ್ಬರ ಟೀಂ ರೆಡಿಯಾಗಿದೆ. ಅಲ್ದೇ ಅಣ್ಣಾಮಲೈ ಅವರಿಗಾಗಿ ಸಾಂಗ್ ಸಹ ರೆಡಿಯಾಗಿದೆ. ಇವರ ಲೈಫ್ ಸ್ಟೈಲ್ ತುಂಬಾ ಜನಕ್ಕೆ ಪ್ರೇರಣೆಯಾಗುತ್ತೆ ಅನ್ನೋ ಕಾರಣಕ್ಕೆ ಸಿನ್ಮಾ ಮಾಡುವ ಪ್ಲಾನ್ ಮಾಡಿದ್ದೇವೆ ಅಂತಿದ್ದಾರೆ.
ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಣ್ಣಾಮಲೈ ಖಡಕ್ ಅಧಿಕಾರಿ. ತಮ್ಮ ಮಾತಿನ ಶೈಲಿ, ಕೆಲಸದಲ್ಲಿ ತೋರಿಸ್ತಿದ್ದ ದಕ್ಷತೆ, ಯಾರಿಗೂ ಕೇರ್ ಮಾಡದೇ ತಮ್ಮ ವೃತ್ತಿಯನ್ನ ಪ್ರೀತಿಸ್ತಿದ್ದವರು. ಸಹದ್ಯೋಗಿಗಳ ಜೊತೆ ಸಹ ಅಷ್ಟೇ ಆತ್ಮೀಯತೆಯಿಂದ ಇರುತ್ತಿದ್ದವರು. ಇಂಥಾ ಅಧಿಕಾರಿ ಇನ್ನೂ ಸೇವೆಯಲ್ಲಿ ಇರಬೇಕು ಅಂತಿದ್ದಾರೆ ಅವರ ಅಭಿಮಾನಿಗಳು. ಹೀಗಾಗಿ ರಾಜೀನಾಮೆ ವಾಪಸ್ ಪಡೆಯಿರಿ ಅನ್ನೋ ಮಾತುಗಳು ಸಹ ಕೇಳಿ ಬರ್ತಿದ್ದು, ಮನಸ್ಸು ಬದಲಾಯಿಸಿ ಅಣ್ಣಾಮಲೈ ಅವರು ಮರಳಿ ಸೇವೆಗೆ ಬರ್ತಾರಾ ಅನ್ನೋ ಕುತೂಹಲವಿದೆ.