ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಆದಾಯ ತೆರಿಗೆ ದಾಳಿಯಲ್ಲಿ ಸಿಕ್ಕಿರುವ ಕೋಟಿ ಕೋಟಿ ಹಣ ಕಾಂಗ್ರೆಸ್ಸಿಗೆ ಸೇರಿದ್ದು ಎಂದು, ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಇಲ್ಲ. ಜೆಡಿಎಸ್ ಪ್ರಾದೇಶಿಕ ಪಕ್ಷ. ಕೇಂದ್ರದಲ್ಲೂ ಅಧಿಕಾರಕ್ಕೆ ಬರಬೇಕು ಎಂದು ಇವರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ಬಿಜೆಪಿಗೆ ಹೋಗುವುದಕ್ಕೆ ವಿರೋಧವಿಲ್ಲ. ನಾನು ನಿಮ್ಮ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ಅಧಿಕಾರ ಹಂಚಿಕೆ ಸರಿಯಾಗಿ ಆಗಲಿ. ಅವರು ನಮ್ಮ ಸ್ನೇಹಿತರು. ಅವರೊಂದಿಗೆ ಮಾತನಾಡುತ್ತೇನೆ ಎಂದು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹೇಳಿದ್ದಾರೆ. ದೆಹಲಿಗೆ ಹೋದಾಗ ಇವರಿಗೆ ಕರೆದಿಲ್ಲ ಅನ್ನೋ ಸಿಟ್ಟು ಇದೆ ಅಂತಾ ಹೇಳಿದರು.
ಜೆಡಿಯುಗೆ ಸೇರಿಸಿಕೊಳ್ಳಲು ಮಹಿಮಾ ಪಾಟೀಲ, ನಾಡಗೌಡರು ಪ್ರಯತ್ನ ನಡೆಸಿರಬಹುದು. ಅವರು ನಮ್ಮೊಂದಿಗೆ ಇರುತ್ತಾರೆ ಎಂದು ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಸಭೆಯಲ್ಲಿ ಹೋಗುವುದಕ್ಕೆ ನಿರ್ಣಯವಾಗಿದೆ. ರಾಜ್ಯಾಧ್ಯಕ್ಷರು ಸಹ ಇದಕ್ಕೆ ಒಪ್ಪಿಗೆ ಇದೆ. ವಿಧಾನಸಭಾ ಚುನಾವಣೆ ಮುಂಚಿತವಾಗಿ ನಮ್ಮನ್ನು ಮುಗಿಸಬೇಕು ಎಂದು ಎರಡು ರಾಷ್ಟ್ರೀಯ ಪಕ್ಷಗಳಿಗಿತ್ತು. ಚುನಾವಣೆ ಬಳಿಕ ಕಾಂಗ್ರೆಸ್, ನಮ್ಮನ್ನು ಮುಗಿಸಲೇಬೇಕು ಅಂತಾ ಪ್ರಯತ್ನಿಸಿದರು ಅಂತಾ ವಾಗ್ದಾಳಿ ನಡೆಸಿದರು.