ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮುಂಬರುವ 2023ರ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಜಲಧಾರೆ ನಂತರ ಪಂಚರತ್ನ ಕಾರ್ಯಕ್ರಮ ನಡೆಸಿದ್ದಾರೆ. ಇದಕ್ಕಾಗಿ ಎಲ್ಇಡಿ ಅಳವಡಿಸಿರುವ 123 ಟಾಟಾ ಏಸ್ ವಾಹನಗಳು ಸಿದ್ಧವಾಗಿವೆ.
ಯಶವಂತಪುರದಲ್ಲಿರುವ ಅರವಿಂದ್ ಮೋಟರ್ಸ್ ಕಂಪನಿಯ ಅಧಿಕಾರಿಗಳು ಬುಧವಾರ ವಾಹನಗಳನ್ನು ಹಸ್ತಾಂತರಿಸಿದರು. ಪಂಚರತ್ನ ಯೋಜನೆಯ ಕಿರುಚಿತ್ರವನ್ನು ಈ ವಾಹನಗಳಲ್ಲಿ ಪ್ರದರ್ಶನಗೊಳ್ಳಲಿದೆ. 180 ಕ್ಷೇತ್ರಗಳಲ್ಲಿ 40 ದಿನಗಳ ಕಾಲ ವಾಹನಗಳು ಸಂಚರಿಸಲಿವೆ.