Search

ಕಾಟೇರ ಚಿತ್ರದ ಯಶಸ್ವಿ ಮಾತು

148

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ಬ್ಲಾಕ್ ಬ್ಲಸ್ಟರ್ ಆಗಿದೆ. ಅನ್ನದಾತನ ಬದುಕಿನ ಕಥೆ ಹೊತ್ತುಬಂದ ಚಿತ್ರ ಯಶಸ್ವಿಯಾಗಿದ್ದು, ಚಿತ್ರ ತಂಡ ಸೋಮವಾರ ಸಂಜೆ ಮಾಧ್ಯಮಗೋಷ್ಠಿ ನಡೆಸಿ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿತು.

ಈ ವೇಳೆ ಮಾಧ್ಯಮದವರು ಚಿತ್ರದಲ್ಲಿ ಬರುವ ಹಿರಣ್ಯಕಶ್ಯಪನ ಡೈಲಾಗ್ ವಿಚಾರವಾಗಿ ವರನಟ ಡಾ.ರಾಜಕುಮಾರ್ ಅವರು ಬಿಟ್ಟರೆ ನೀವೆ ಎಂದು ಹೇಳಲಾಗುತ್ತಿದೆ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ದರ್ಶನ್, ಡಾ.ರಾಜಕುಮಾರ್ ಅವರ ಕಾಲ ಧೂಳಿಗೂ ನಾವು ಸಮವಲ್ಲ. ಅಲ್ಲಿವರೆಗೂ ಎತ್ಕೊಂಡು ಹೋಗಬೇಡಿ. ಪ್ರಯತ್ನಪಡಬಹುದು. ಅವರು ಮಾಡಿದ್ದರಲ್ಲಿ 00.01 ಪರ್ಸೆಂಟ್ ಸಹ ನಾವಿಲ್ಲ ಎಂದರು.

ಇನ್ನು ನಿರ್ದೇಶಕ ತರುಣ್ ಸುಧೀರ್ ಮಾತನಾಡಿ, ದರ್ಶನ್ ಅವರು ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದು ಹೇಗೆ? ಅವರ ಮೇಕಪ್ ವಿಚಾರವಾಗಿ ಏನೆಲ್ಲ ಚರ್ಚೆಯಾಗಿ ಕೊನೆಗೆ ಮೈಸೂರು ಮೂಲದ ಕಲಾವಿದರೆ ಅವರನ್ನು ಮೇಕಪ್ ಮಾಡಿದ್ದು ಎಂದರು. ಇದಕ್ಕಾಗಿ ಎರಡು ಬಾರಿ ಸ್ಕ್ರೀನ್ ಟೆಸ್ಟ್ ಮಾಡಿಸಿ ನಂತರ ಓಕೆ ಎನ್ನಲಾಯಿತು ಎಂದರು.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಪ್ಯಾನ್ ಇಂಡಿಯಾ ಸಿನಿಮಾ ವಿಚಾರ ಬಂದಾಗ ದರ್ಶನ್ ಹೇಳಿದ್ದು ಒಂದೇ ಮಾತು. ನಮ್ಮ ಜನರಿಗಾಗಿ ಸಿನಿಮಾ ಮಾಡೋಣ. ಪ್ಯಾನ್ ಇಂಡಿಯಾ ಅಂತಾ ಹೋದಾಗ ಆಯಾ ರಾಜ್ಯದ ಒಂದಿಷ್ಟು ವಿಷಯಗಳನ್ನು ತರಬೇಕಾಗುತ್ತೆ. ಆಗ ನಮ್ಮ ಸಂಸ್ಕೃತಿ ಕಡಿಮೆಯಾಗುತ್ತಾ ಹೋಗುತ್ತೆ. ಸಿನಿಮಾ ಸಕ್ಸಸ್ ಆದರೆ ಡಬ್ ಆಗಲಿ ಅಂದರು. ಹೀಗಾಗಿ ಈ ಮಟ್ಟದ ಸಕ್ಸಸ್ ಸಿಕ್ಕಿದೆ ಎಂದರು.




Leave a Reply

Your email address will not be published. Required fields are marked *

error: Content is protected !!