ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಿರ್ದೇಶಕ ದಿನೇಶ ಬಾಬು ಆ್ಯಕ್ಷನ್ ಕಟ್ ಹೇಳುತ್ತಿರುವ ಕಸ್ತೂರಿ ಮಹಲ್ ಚಿತ್ರದ ಶೂಟಿಂಗ್ ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಲ್ಲಿ ಭರದಿಂದ ಸಾಗಿದೆ. ಹಾರರ್ ಥ್ರಿಲ್ಲರ್ ಕಥೆಯನ್ನ ಹೊಂದಿರುವ ಚಿತ್ರದಲ್ಲಿ ಸ್ಕಂದ ಅಶೋಕ, ನಟಿ ಶಾನ್ವಿ ಶ್ರೀವಾತ್ಸವ, ಶ್ರುತಿ ಪ್ರಕಾಶ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾ ಬಳಗವೆ ಇದರಲ್ಲಿದೆ.
ಶ್ರೀಭವಾನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣವಾಗ್ತಿರುವ ಚಿತ್ರವನ್ನ ರುಬಿನ್ ರಾಜ್ ಹಾಗೂ ರವೀಶ ಆರ್.ಸಿ ಎಂಬುವರು ನಿರ್ಮಾಣ ಮಾಡ್ತಿದ್ದಾರೆ. ನಿರ್ದೇಶಕ ದಿನೇಶ ಬಾಬು ಅವರಿಗೆ ಇದು 50ನೇ ಚಿತ್ರ ಅನ್ನೋದು ವಿಶೇಷ. ಈ ಮೂವಿ ಕೊಟ್ಟಿಗೆಹಾರದ ಪ್ರೃಕತಿ ನಡುವೆ ಶೂಟಿಂಗ್ ನಡೆಸಿದೆ.