ಡಿಕೆಶಿ ಪದಗ್ರಹಣಕ್ಕೆ ಸರ್ಕಾರ ಕೊಡಲಿಲ್ಲ ಅನುಮತಿ

377

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಪದಗ್ರಹಣಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಣೆ ಮಾಡಿದೆ. ಜೂನ್ 14ರಂದು ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಂಬಂಧ, ಕಾರ್ಯಕ್ರಮದ ಅನುಮತಿಗಾಗಿ ಸರ್ಕಾರಕ್ಕೆ ಪತ್ರ ಬರೆದಿದ್ರು. ಆದ್ರೆ, ಸರ್ಕಾರ ನೋ ಎಂದಿದೆ.

ಕರೋನಾ ಸೋಂಕಿನಿಂದಾಗಿ ಲಾಕ್ ಡೌನ್ ಇದೆ. ಹೀಗಾಗಿ ಸೋಂಕಿನ ಭೀತಿಯಿಂದಾಗಿ ಪದಗ್ರಹಣ ಕಾರ್ಯಕ್ರಮವನ್ನ ನಡೆಸಲು ನಿರಾಕರಣೆ ಮಾಡಲಾಗಿದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗಿ ಮೂರ್ನಾಲ್ಕು ತಿಂಗಳು ಆಗಿದೆ. ಕರೋನಾದಿಂದಾಗಿ ಪದಗ್ರಹಣ ಮಾಡಲು ಆಗ್ತಿಲ್ಲ. ಈಗ ಜೂನ್ 14ಕ್ಕೆ ಪ್ಲಾನ್ ಮಾಡಿದ್ರು. ಆದ್ರೆ, ಸರ್ಕಾರ ಅನುಮತಿ ನೀಡಿಲ್ಲ. ರಾಜ್ಯದಲ್ಲಿ ಇದ್ಯಾವ ಸ್ವರೂಪ ಪಡೆಯುತ್ತಿದೆ ಗೊತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!