ಪ್ರಜಾಸ್ತ್ರ ಸುದ್ದಿ
ತಾಳಿಕೋಟೆ: ವಿಜಯಪುರ ಜಿಲ್ಲೆ ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ತಮ್ಮನ್ನ ಪೂರ್ಣ ಪ್ರಮಾಣದ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ನೂರಕ್ಕೂ ಅಧಿಕ ಚಾಲಕ, ನಿರ್ವಾಹಕರು ಸೇರಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದು, ನಮಗೆ ಹಾಗೂ ನಮ್ಮ ಕುಟುಂಬಸ್ಥರಿಗೆ ಜೈಲಿಗೆ ಕಳುಹಿಸಿದ್ರೂ ಪರವಾಗಿಲ್ಲ. ನಾವು ಮಾತ್ರ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ. ಎಸ್ಮಾ ಸೇರಿದಂತೆ ಯಾವುದೇ ಕಾಯ್ದೆ ಜಾರಿ ಮಾಡಿದ್ರೂ ನಾವು ಹೆದರೋದಿಲ್ಲ ಎಂದು ಬಸ್ ಚಾಲಕ ಬಸನಗೌಡ ಬಿರಾದಾರ ಹೇಳಿದ್ದಾರೆ.