ಬ್ರೇಕಿಂಗ್ ನ್ಯೂಸ್: ಬುದ್ದಿಮಾತು ಹೇಳಿದ್ದಕ್ಕೆ ವಿಷ ಕುಡಿದ ಚಿಕ್ಕಸಿಂದಗಿ ಯುವಕ

424

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತುಂಬಾ ಸ್ಪೀಡ್ ಆಗಿ ಬೈಕ್ ಓಡಿಸಬೇಡ ಎಂದು ಕುಟುಂಬಸ್ಥರು ಬುದ್ದಿಮಾತು ಹೇಳಿದ್ದಕ್ಕೆ ಯುವಕನೊಬ್ಬ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ. ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗ್ತಿದೆ.

ಸುಮಾರು 21 ವರ್ಷದ ಯುವಕ ಶಿವು ಜೋಗುರ ಎಂಬಾತ ಹೊಲದಲ್ಲಿ ವಿಷ ಕುಡಿದಿದ್ದಾನೆ ಎಂದು ಹೇಳಲಾಗ್ತಿದೆ. ವಿಷಯ ತಿಳಿದ ತಕ್ಷಣ ಯುವಕನನ್ನ ಸಿಂದಗಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲು ಕರೆದುಕೊಂಡು ಬರಲಾಗಿದೆ.

ಆದ್ರೆ, ಯುವಕನ ಸ್ಥಿತಿ ಗಂಭೀರವಾಗಿರುವ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!