ತಲೆ ಮೇಲೆ ಚಪ್ಪಲಿಯಿಟ್ಟುಕೊಂಡ ಸಾರಿಗೆ ನೌಕರರು

254

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಕೆಎಸ್ಆರ್ ಟಿಸಿ ನೌಕರರ ಪ್ರತಿಭಟನೆ ಶನಿವಾರವೂ ಮುಂದುವರೆದಿದೆ. ಎರಡನೇ ದಿನಕ್ಕೆ ಕಾಲಿಟ್ಟಿರುವ ಮುಷ್ಕರದಲ್ಲಿ ಸಿಬ್ಬಂದಿ ಮತ್ತೊಂದು ಹಂತದ ಪ್ರತಿಭಟನೆ ನಡೆಸಿದ್ದಾರೆ. ತಲೆ ಮೇಲೆ ಚಪ್ಪಲಿಯಿಟ್ಟುಕೊಂಡು ಹೋರಾಟ ಮಾಡ್ತಿದ್ದಾರೆ.

ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ಮಾಡ್ತಿರುವ ಸಿಬ್ಬಂದಿ, ತಲೆ ಮೇಲೆ ಚಪ್ಪಲಿ ಇಟ್ಟುಕೊಂಡಿದ್ದಾರೆ. ಸಾರಿಗೆ ಸಚಿವರ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರೆಸಿದ್ದಾರೆ. ಇದರ ಪರಿಣಾಮ ರಾಜ್ಯದ ಜನರ ಮೇಲಾಗಿದ್ದು, ಬಸ್ ಸಂಚಾರವಿಲ್ಲದೆ ಜನರು ಪರದಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!