ಏ.30ರ ತನಕ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸಲು ಸಲಹೆ

352

ಬೆಂಗಳೂರು: ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಏಪ್ರಿಲ್ 30ರ ತನಕ ಲಾಕ್ ಡೌನ್ ಮುಂದುವರೆಸಲು ಸಿಎಂ ಸಲಹೆ ನೀಡಲಾಗಿದೆ. ಹಲವು ಸಚಿವರು ಲಾಕ್ ಡೌನ್ ಮುಂದುವರೆಸಿದ್ರೆ ಒಳ್ಳೆಯದು ಅನ್ನೋ ಸಲಹೆ ನೀಡಿದ್ದಾರೆ.

ಏಪ್ರಿಲ್ 11ರಂದು ಪ್ರಧಾನಿ ಮೋದಿ, ಸಿಎಂಗಳೊಂದಿಗೆ ಸಭೆ ನಡೆಸಲಿದ್ದಾರೆ. ಅಂದು ಅವರು ಯಾವ ನಿರ್ಧಾರ ತೆಗೆದುಕೊಳ್ತಾರೋ ಅಂದುನ್ನ ನೋಡಿಕೊಂಡು ರಾಜ್ಯದಲ್ಲಿ ಏನು ಮಾಡ್ಬೇಕು ಅನ್ನೋ ನಿರ್ಧಾರ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಏಪ್ರಿಲ್ 14ರ ನಂತರ, ಲಾಕ್ ಡೌನ್ ಮುಂದುವರೆಸಬೇಕಾ, ಕರೋನಾ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಮಾತ್ರ ಮುಂದುವರೆಸಬೇಕಾ ಅನ್ನೋದರ ಕುರಿತು ಚರ್ಚೆ ನಡೆಸಿದ್ರು.

ಜಿಲ್ಲಾವರು ಮಾಹಿತಿ ಪಡೆದುಕೊಂಡು ಚರ್ಚೆ ನಡೆಸಿದ್ದು, ಈ ವೇಳೆ ಬಹುತೇಕ ಸಚಿವರು, ಲಾಕ್ ಡೌನ್ ಮುಂದುವರೆಸಿ ಅನ್ನೋ ಸಲಹೆ ನೀಡಿದ್ದಾರೆ. ಈಗಾಗ್ಲೇ ಡಾ.ದೇವಿ ಶೆಟ್ಟ ಅಧ್ಯಕ್ಷತೆಯ ತಜ್ಞರ ಸಮಿತಿ ವರದಿ ಸಲ್ಲಿಸಿದ್ದು, ಹಂತ ಹಂತವಾಗಿ ಲಾಕ್ ಡೌನ್ ತೆರವು ಮಾಡಲು ಸಲಹೆ ನೀಡಿದೆ. ಹೀಗಾಗಿ ಜನಕ್ಕೆ ಹೇಳ್ತಿರುವುದು, ಮನೆಯಿಂದ ಸುಖಾಸುಮ್ಮನೆ ಆಚೆ ಬರಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇಲ್ದೇ, ಇದರ ಎಲ್ಲರ ಬದುಕು ಬೀದಿಪಾಲಾಗುತ್ತೆ ಅಂದ್ರೂ ಕೇಳುತ್ತಿಲ್ಲ. ಅದರ ಎಫೆಕ್ಟ್ ಅನುಭವಿಸಲೇಬೇಕು.




Leave a Reply

Your email address will not be published. Required fields are marked *

error: Content is protected !!