ಸಿಂದಗಿ: ಜೀವನಕ್ಕಾಗಿ ದೂರದ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ತಾಲೂಕಿನ ನೂರಾರು ಕುಟುಂಬಗಳು ವಲಸೆ ಹೋಗಿವೆ. ಆದ್ರೆ, ಇದೀಗ ಕರೋನಾ ಲಾಕ್ ಡೌನ್ ನಿಂದಾಗಿ ಅದೆಷ್ಟೋ ಕುಟುಂಬಗಳು ಕೆಲಸ ಕಳೆದುಕೊಂಡಿದ್ದು, ಅತ್ತ ಜೀವನ ಮಾಡಲು ಆಗದೆ, ಇತ್ತ ಊರಿಗೆ ಬರಲು ಆಗದೆ ಒದ್ದಾಡ್ತಿದ್ದಾವೆ.
ಅದೆ ರೀತಿ ತಾಲೂಕಿನ ಖೈನೂರು ಗ್ರಾಮದ ಕುಟುಂಬವೊಂದು ಲಾಕ್ ಆಗಿದೆ. ಈ ಕುಟುಂಬಕ್ಕೆ ಜಿ.ಆರ್ ಗ್ರೂಪ್ ಧಾರವಾಡ, ಇದರ ಮುಖ್ಯಸ್ಥರಾಗಿರುವ ಸಿಂದಗಿ ತಾಲೂಕಿನವರೆ ಆದ ಶಿವಾನಂದ ಪಾಟೀಲ ಸೋಮಜಾಳ ಅವರು, 10 ಸಾವಿರ ರೂಪಾಯಿ ಧನಸಹಾಯ ಮಾಡಿದ್ದಾರೆ. ಅಕೌಂಟ್ ಮೂಲಕ ಹಣ ವರ್ಗಾವಣೆ ಮಾಡಿ ಕುಟುಂಬದ ನೆರವಿಗೆ ಬಂದಿದ್ದು, ಆ ಕಟುಂಬದಲ್ಲಿ ಒಂದಿಷ್ಟು ಖುಷಿ ಮೂಡಿದೆ.