ಮಂಡ್ಯ: ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬಡಕುಟುಂಬಕ್ಕೆ ಸಚಿವರ ಅಭಿಮಾನಿ ಬಳಗ ನೆರವಿಗೆ ಬಂದಿದೆ. ಎರಡು ದಿನಗಳಿಂದ ಅಡುಗೆ ಮಾಡಲು ದಿನಬಳಕೆ ವಸ್ತುಗಳಿಲ್ಲದೆ ಪರದಾಡುತ್ತಿದ್ದ ಶ್ರೀನಿವಾಸ ಮತ್ತು ಸುಮ ಅನ್ನೋರ ಕುಟುಂಬಕ್ಕೆ ನೆರವು ನೀಡಲಾಗಿದೆ.
ಸಚಿವ ನಾರಾಯಣಗೌಡರ ಅಭಿಮಾನಿ ಬಳಗದ ಪ್ರಥಮ ದರ್ಜೆ ಗುತ್ತಿಗೆದಾರರಾದ ಅಗ್ರಹಾರಬಾಚಹಳ್ಳಿ ಎ.ಪಿ.ಕೇಶವಗೌಡ ಅವರು, ಗ್ಯಾಸ್ ಕನೆಕ್ಷನ್, ದಿನಬಳಕೆ ವಸ್ತುಗಳು, ದಿನಸಿ ವಸ್ತುಗಳನ್ನ ನೀಡಿ ಕುಟುಂಬದ ನೆರವಿಗೆ ಬಂದಿದ್ದಾರೆ. ಎರಡು ಚಿಕ್ಕ ಹೆಣ್ಣುಮಕ್ಕಳನ್ನ ಹೊಂದಿರುವ ದಂಪತಿ ಕೆಲಸ ಹುಡುಕಿಕೊಂಡು ಹೋಗಿದ್ದಾರೆ. ಲಾಕ್ ಡೌನ್ ಟೈಂನಲ್ಲಿ ಎಲ್ಲಿದೆ ಕೆಲಸ. ಹೀಗಾಗಿ ಕಳೆದ ಎರಡು ದಿನಗಳಿಂದ ಊಟವಿಲ್ಲದೆ ಪರದಾಡಿದ್ದಾರೆ.
ಬಳಿಕ ಸಚಿವ ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ, ಪ್ರಥಮ ದರ್ಜೆ ಗುತ್ತಿಗೆದಾರ ಡಿ.ಪಿ.ಪರಮೇಶ, ಮೆಣಸಕುಮಾರ (ಗ್ಯಾಸ್), ಮರುವನಹಳ್ಳಿ ನಿಂಗೇಗೌಡ, ಹಂಸ ರಾಮಣ್ಣ, ಬಿಸಿಎಮ್ ಹಾಸ್ಟೆಲ್ ವೆಂಕಟೇಶ್ ಅವರು ಸಹಾಯ ಮಾಡಿ ಮಾನವೀಯತೆ ಮೆರದಿದ್ದಾರೆ.