ಮುಂಬೈ: ಸಿಎಂ ಉದ್ಧವ್ ಠಾಕ್ರೆ ಸರ್ಕಾರದ ಸಚಿವ ಸಂಪುಟ ರಚನೆಯಾಗಿದೆ. ಶಿವಸೇನ, ಕಾಂಗ್ರೆಸ್ ಹಾಗೂ ಎನ್ ಸಿಪಿಯ 36ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಜಿತ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮೊದಲ ಬಾರಿಗೆ ಶಾಸಕರಾಗಿರುವ ಸಿಎಂ ಪುತ್ರ ಆದಿತ್ಯ ಠಾಕ್ರೆ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಕೇಂದ್ರ ಸರ್ಕಾರ ರಚನೆ ಮಾಡಿರುವ ಪಿಎಂಒ(ಪ್ರಧಾನ ಮಂತ್ರಿ ಕಚೇರಿ) ಇಲಾಖೆ ಮಾದರಿಯಲ್ಲಿ ಸಿಎಂಒ ಇಲಾಖೆ ಮಾಡಿ ಆದಿತ್ಯಗೆ ನೀಡಬಹುದು ಅಂತಾ ಹೇಳಲಾಗ್ತಿದೆ. ಈ ಮೂಲಕ ಆದಿತ್ಯಗೆ ಈಗಿನಿಂದಲೇ ದೊಡ್ಡ ಹುದ್ದೆ ನೀಡುವ ಪ್ಲಾನ್ ನಡೆದಿದೆ.