9 ಬಂಡಾಯ ಸಚಿವರ ಖಾತೆ ಬೇರೆಯವರಿಗೆ ಹಂಚಿಕೆ!

165

ಪ್ರಜಾಸ್ತ್ರ ಸುದ್ದಿ

ಮುಂಬೈ: ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಏಕನಾಥ್ ಶಿಂಧೆ ನೇತೃತ್ವದ ಟೀಂಗೆ ಸಿಎಂ ಉದ್ಧವ್ ಠಾಕ್ರೆ ಮತ್ತೊಂದು ಶಾಕ್ ನೀಡಿದ್ದು, 9 ಬಂಡಾಯ ಸಚಿವರ ಖಾತೆಯನ್ನು ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆಡಳಿತದ ಅನುಕೂಲವಾಗಿ 9 ಸಚಿವರ ಖಾತೆಯನ್ನು ಇತರರಿಗೆ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಹೊರ ಬಿದ್ದಿದೆಯಂತೆ. ಸಂಪುಟ ದರ್ಜೆ ಹಾಗೂ ರಾಜ್ಯ ಖಾತೆ ಸಚಿವರ ಖಾತೆಯನ್ನು ಇತರರಿಗೆ ನೀಡಲಾಗಿದೆ. ಅಲ್ಲಿಗೆ ರಾಜಕೀಯ ಗುದ್ದಾಟ ಮುಂದುವರೆದಿದೆ.




Leave a Reply

Your email address will not be published. Required fields are marked *

error: Content is protected !!