ಪ್ರಜಾಸ್ತ್ರ ಸುದ್ದಿ
ಮೈಸೂರು: ಕಾಂಗ್ರೆಸ್ ವಿರುದ್ಧ ಅವಾಚ್ಯ ಶಬ್ದ ಬಳಕೆ ವಿಚಾರವಾಗಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಶ್ವರಪ್ಪಗೆ ಸಂಸ್ಕಾರ, ಸಂಸ್ಕೃತಿ ಗೊತ್ತಿಲ್ಲ. ಅವರು ಬೆಳೆದು ಬಂದ ರೀತಿಯೇ ಅಂತಹದ್ದು. ಅವರಿಂದ ನಿರೀಕ್ಷೆ ಮಾಡಬಾರದು ಎಂದಿದ್ದಾರೆ.
ಈಶ್ವರಪ್ಪ ಮೊದಲಿನಿಂದಲೂ ಹಾಗೆಯೇ. ಆರೋಗ್ಯಕರವಾದ ಸಂಸ್ಕೃತಿಯಿಲ್ಲ. ಅವರಿಗೆ ಬುದ್ದಿ ಹೇಳುವ ಕೆಲಸ ಬಿಜೆಪಿ ಮಾಡುತ್ತಿಲ್ಲ. ಅವರು ಬಳಸಿರುವ ಪದವನ್ನ ಯಾರು ಬೇಕಾದರೂ ಬಳಸಬಹುದು. ಆದ್ರೆ, ಸಂಸ್ಕಾರ ಇರುವವರು ಬಳಸುವುದಿಲ್ಲವೆಂದು ಕಿಡಿ ಕಾರಿದ್ದಾರೆ.