ಅಥಣಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಜಾತ್ರಾಮಹೋತ್ಸವ ರದ್ದು ಮಾಡಲಾಗಿದೆ. ಆದ್ರೆ, ಕೆಲವು ಕಡೆ ನಿಯಮ ಉಲ್ಲಂಘಿಸಿ ಜಾತ್ರೆ ಮಾಡ್ತಿರುವ ವರದಿ ಸಹ ಆಗಿವೆ. ಹೀಗಾಗಿ ತಾಲೂಕಿನ ನಂದಿ ಬಸವೇಶ್ವರ ದೇವಸ್ಥಾನ ಕಮಿಟಿ, ಜಾತ್ರೆ ರದ್ದು ಮಾಡಿರುವುದಾಗಿ ತಿಳಿಸಿದೆ.
ತಾಲೂಕಿನ ನಂದಿ ಇಂಗಳಗಾಂವ ಗ್ರಾಮದಲ್ಲಿ ಏಪ್ರಿಲ್ 26ರಂದು ಜರುಗಬೇಕಿದ್ದ ಬಸವ ಜಯಂತಿ ಹಾಗೂ ಬಸವೇಶ್ವರ ಜಾತ್ರೆಯನ್ನ ರದ್ದು ಮಾಡಲಾಗಿದೆ. ಹೀಗಾಗಿ ದೇವಸ್ಥಾನಕ್ಕೆ ನೈವೇದ್ಯ, ತೆಂಗು, ಕರ್ಪೂರ ತರುವುದು, ದೀರ್ಘದಂಡ ನಮಸ್ಕಾರದಂತ ಸೇವೆಗಳನ್ನ ನಿಷೇಧಿಸಲಾಗಿದೆ. ಹೀಗಾಗಿ ಭಕ್ತರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.