ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಿಸರ್ಗ ಚಂಡಮಾರುತದ ಪರಿಣಾಮ ಮಹಾರಾಷ್ಟ್ರದ ವಾಣಿಜ್ಯನಗರಿ ತಲ್ಲಣಿಸಿದೆ. ಭರ್ಜರಿ ಗಾಳಿ, ಮಳೆಯಿಂದಾಗಿ ಮರಗಳು ಧರೆಗೆ ಉರುಳಿವೆ. ವಿದ್ಯುತ್ ಕಂಬಗಳು ಬಿದ್ದು ಸಂರ್ಪಕ ಕಡಿತಗೊಂಡಿವೆ. ವಿದ್ಯುತ್ ಕಂಬ ಬಿದ್ದು ಓರ್ವ ವೃದ್ಧೆ ಸಾವನ್ನಪ್ಪಿದ್ದಾಳೆ.
ಅಲಿಬಾಗ್ ನ ಉಮ್ಟೆ ಗ್ರಾಮದಲ್ಲಿ 58 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಅಲಿಬಾಗ್ ಜಿಲ್ಲೆಯಲ್ಲಿ 85ಕ್ಕೂ ಅಧಿಕ ಮರಗಳು ಬಿದ್ದಿವೆ. 11 ವಿದ್ಯುತ್ ಕಂಬಗಳು ಬಿದ್ದಿವೆ. ರಾಯಗಡ ಜಿಲ್ಲೆಯಲ್ಲಿ ನೂರಾರು ಮರಗಳು ಧರೆಗುರುಳಿವೆ. ಇವುಗಳನ್ನ ತೆರವುಗೊಳಿಸುವ ಕೆಲಸ ನಡೆದಿದೆ.
ಅರಬ್ಬೀ ಸಮುದ್ರದಿಂದ ಮಹಾರಾಷ್ಟ್ರದ ಕಡೆ 120 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸ್ತಿದ್ದು, ಭರ್ಜರಿ ಮಳೆಯಾಗ್ತಿದೆ. ಇದರ ಎಫೆಕ್ಟ್ ಮತ್ತೆ ಕರ್ನಾಟಕದ ಮೇಲಾಗುತ್ತಾ ಅನ್ನೋ ಆತಂಕ ಮನೆ ಮಾಡಿದೆ.