ವಿಪಕ್ಷ ನಾಯಕನಾಗಲು ಸಿದ್ಧ ಎಂದ ಅಶ್ವಥನಾರಾಯಣ

188

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಯಾರಗಬೇಕು ಎಂದು ಬಿಜೆಪಿಯಲ್ಲಿ ದೊಡ್ಡ ಗೊಂದಲ ಸೃಷ್ಟಿಸಿದೆ. ಇಂದು ಸಂಜೆಯೊಳಗೆ ನಾಯಕನ ತೀರ್ಮಾನವಾಗಬೇಕಿದೆ. ಯಾಕಂದರೆ, ನಾಳೆಯಿಂದ ಬಜೆಟ್ ಅಧಿವೇಶನ ನಡೆಯಲಿದೆ. ಈ ಕುರಿತು ಮಾತನಾಡಿರುವ ಮಾಜಿ ಡಿಸಿಎಂ ಅಶ್ವಥನಾರಾಯಣ, ವಿಪಕ್ಷ ಸ್ಥಾನ ನನಗೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ.

ವಿರೋಧ ಪಕ್ಷದ ನಾಯಕನಾಗಲು ನಮ್ಮಲ್ಲಿ ಆಕಾಂಕ್ಷಿಗಳು ಇಲ್ಲ. ಹೈಕಮಾಂಡ್ ಯಾರಿಗೆ ಹೇಳುತ್ತೋ ಅವರಾಗುತ್ತಾರೆ. ನಾಯಕನ ಆಯ್ಕೆಗೂ ಅವಸರ ಇರಲಿಲ್ಲ. ನಾಳೆಯಿಂದ ಅಧಿವೇಶನ ನಡೆಯಲಿದ್ದು, ನಾಳೆಯೊಳಗೆ ಘೋಷಣೆಯಾಗಲಿದೆ. ನನಗೆ ಅವಕಾಶ ಕೊಟ್ಟರೆ ನಿರ್ವಹಿಸುತ್ತೇನೆ ಅಂತಾ ಪರೋಕ್ಷವಾಗಿ ತಾವೂ ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿ ಎಂದು ಅಶ್ವಥನಾರಾಯಣ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!