ನವದೆಹಲಿ: ನಿನ್ನೆ ಮಧ್ಯರಾತ್ರಿಯವರೆಗೂ ಸಂಸತ್ತಿನಲ್ಲಿ ಚರ್ಚೆ ನಡೆದಿದೆ. ಕೃಷಿ ವಲಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗಿದೆ. 18 ವರ್ಷಗಳ ಬಳಿಕ ಕಳೆದ ವಾರ ಸಹ ಮಧ್ಯರಾತ್ರಿವರೆಗೂ ಚರ್ಚೆ ನಡೆಸಲಾಗಿತ್ತು. ಇದೀಗ ನಿನ್ನೆ ಸಹ ಮಿಡ್ ನೈಟ್ ವರೆಗೂ ಚರ್ಚೆ ನಡೆದಿದೆ.
ಕೃಷಿ ಆದಾಯ ಹೆಚ್ಚಳ, ರೈತರ ಆತ್ಮಹತ್ಯೆ ಪ್ರಕರಣ, ನೀರಾವರಿ ಸಮಸ್ಯೆ, ಹವಾಮಾನ ವೈಪರಿತ್ಯ ಸೇರಿದಂತೆ ಕೃಷಿ ವಲಯದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಂಸದರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಹಾಗೂ ರೈತರ ಬಗ್ಗೆ ಮಧ್ಯರಾತ್ರಿಯವರೆಗೂ ಚರ್ಚೆ ನಡೆದಿರೋದು ಸ್ವಾಗತಾರ್ಹ ಎಂದಿದ್ದಾರೆ. ಇನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಬೆಳವಣಿಗೆ ಆಶಾದಾಯಕ ಅಂತಾ ಹೇಳಿದ್ದಾರೆ.