ದೋಸ್ತಿಗೆ ಸಿಹಿನಾ.. ಬಂಡಾಯ ಪಡೆಗೆ ಸಿಹಿನಾ..

374

ನವದೆಹಲಿ: ಕಳೆದ ಹದಿನೈದು ದಿನಗಳಿಗೂ ಹೆಚ್ಚು ಕಾಲ ರಾಜ್ಯದಲ್ಲಿ ನಡೆಯುತ್ತಿರುವ ಪ್ರಹಸನಕ್ಕೆ ಇಂದು ತೆರೆ ಬೀಳುವ ಸಾಧ್ಯತೆಯಿದೆ. 15 ಜನ ಅತೃಪ್ತ ಶಾಸಕರು, ಸ್ಪೀಕರ್ ಹಾಗೂ ಸಿಎಂ ಪರವಾದ ಅರ್ಜಿಯ ವಿಚಾರಣೆ ನಿನ್ನೆ ಸುದೀರ್ಘವಾಗಿ ನಡೆದಿದೆ. ಅದರ ತೀರ್ಪು ಇಂದು ಮುಂಜಾನೆ 10.30ಕ್ಕೆ ಹೊರ ಬೀಳಲಿದೆ.

ರಾಜೀನಾಮೆ ಅಂಗೀಕಾರ ಮೊದಲೋ, ಅನರ್ಹತೆ ವಿಚಾರ ಮೊದಲೋ ಅನ್ನೋದರ ಸ್ಪಷ್ಟ ಚಿತ್ರಣ ಇಂದು ಸಿಗಲಿದೆ. ಈ ಮೂಲಕ ಮೈತ್ರಿ ಸರ್ಕಾರದ ಭವಿಷ್ಯ ಏನು ಅನ್ನೋದು ತಿಳಿಯಲಿದೆ. ಸಿಎಂ ಗುರುವಾರ ಬಹುಮತ ಸಾಬೀತು ಮಾಡ್ತೀನಿ ಅಂತಾ ಹೇಳಿದ್ದಾರೆ. ಅದು ಸಾಧ್ಯವಾಗುತ್ತಾ ಇಲ್ಲಾ ಅನ್ನೋದಕ್ಕೆ ಉತ್ತರ ಸಿಗಲಿದೆ.

ಸಿಜೆಐ ರಂಜನ ಗೊಗಾಯ್ ಅವರ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಇಂದು ತೀರ್ಪು ನೀಡಲಿದೆ. ಹೀಗಾಗಿ ಇದೀಗ ಎಲ್ಲರ ಚಿತ್ತ ಸುಪ್ರೀಂ ನೀಡುವ ತೀರ್ಪಿನತ್ತ ನೆಟ್ಟಿದೆ. ಅದು ಇನ್ನು ಕೆಲವೇ ಕ್ಷಣಗಳಲ್ಲಿ ಹೊರ ಬರುತ್ತೆ. ಮೈತ್ರಿ ಸರ್ಕಾರಕ್ಕೆ ಖುಷಿ ನೀಡುತ್ತಾ.. ಮುನಿಸಿಕೊಂಡು ಮುಂಬೈಗೆ ಹಾರಿರುವ ಶಾಸಕರಿಗೆ ಸಿಹಿ ನೀಡುತ್ತಾ ಅನ್ನೋದು ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!