ಪ್ರಜಾಸ್ತ್ರ ಸುದ್ದಿ
ಇಂದು ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ 83ನೇ ಹುಟ್ಟು ಹಬ್ಬ. ಅವರಿಲ್ಲದ ಹೊತ್ತಿನಲ್ಲಿ ಅವರ ಅಭಿಮಾನಿಗಳು, ಆಪ್ತರು ಹೊಸ ಹೊಸ ಕಾರ್ಯಕ್ರಮಗಳನ್ನ ಮಾಡಿಕೊಂಡು ಬರುತ್ತಿದ್ದಾರೆ. ಅದೆ ರೀತಿ ಕರ್ನಾಟಕ ಚಿತ್ರಕಲಾ ಪರಿಷತ್ ‘ತೇಜಸ್ವಿ ಜೀವಲೋಕ’ ಕಾರ್ಯಕ್ರಮ ಆಯೋಜಿಸಿದೆ.
ಪ್ರತಿವರ್ಷದಂತೆ ಈ ವರ್ಷವೂ ತೇಜಸ್ವಿ ಜೀವಲೋಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ರಣಹದ್ದುಗಳ ಲೋಕ ಅನಾವರಣಗೊಳ್ಳಲಿದೆ. ಹದ್ದು ಹಾಗೂ ರಣಹದ್ದುಗಳ ಕುರಿತು ಹಾಗೂ ಕರೋನಾಕ್ಕೆ ಸಂಬಂಧಿಸಿದಂತೆ ‘ಹದ್ದುಗಳ ಅದ್ಭುತ ಲೋಕ’ ಹಾಗೂ ‘ಕರೋನಾ ಲೋಕ’ ಅನ್ನೋ ಕಾರ್ಯಕ್ರಮ ನಡೆಸಲಾಗ್ತಿದೆ ಎಂದು ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ ಹೇಳಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಸೆಪ್ಟೆಂಬರ್ 8ರಿಂದ 15ರವರೆಗೂ ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯ ತನಕ ಛಾಯಾಚಿತ್ರ, ಕಿರುಚಿತ್ರ ಪ್ರದರ್ಶನ, ತಜ್ಞರೊಡನೆ ಸಂವಾದ ನಡೆಯಲಿದೆ. ಬೇರೆ ಬೇರೆ ಊರುಗಳಲ್ಲಿರುವವರು ವೆಬಿನಾರ್ ಮೂಲಕ ಭಾಗವಹಿಸಬಹುದು. 9448077019 ನಂಬರ್ ಗೆ ಕಾಲ್ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.