ಸಿಂದಗಿಯಲ್ಲಿ ದಲ್ಲಾಳಿಗಳಿಂದ ರೈತರನ್ನ ರಕ್ಷಿಸಿ

507

ಪ್ರಜಾಸ್ತ್ರ ಓದುಗರ ಅಭಿಪ್ರಾಯ ವಿಭಾಗ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಪ್ರತಿ ದಿನ ಮುಂಜಾನೆ 3 ರಿಂದ 6ರವರೆಗೆ ನೆಡೆಯುವ ಸಂತೆಯಲ್ಲಿ ಬಹಳಷ್ಟು ಗಲಾಟೆಗಳು ನಡೆಯುತ್ತಿವೆ. ದಲ್ಲಾಳಿಗಳು ರೈತರನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಲೇ ಇದ್ದಾರೆ. ಸುಮ್ಮನೆ ರೈತರನ್ನು ಬಾಯಿಗೆ ಬಂದಂತೆ ಬಯುವುದು. ರೈತರು ಕೂಳಿತ ಜಾಗದಿಂದ ಎಬ್ಬಿಸುವುದು ಮಾಡುತ್ತಿದ್ದಾರೆ.

ಸಧ್ಯ ಇರುವ ಸ್ಥಳದಲ್ಲಿ ಇಡಿ ಸಿಂದಗಿ ತಾಲೂಕಿನ ತರಕಾರಿ ಬೆಳೆಯುವ ರೈತರು ಒಂದೆಡೆ ಮೂಲೆಯಲ್ಲಿ ಕೂಳಿತುಕೊಳ್ಳಬೇಕು. ನಾಲ್ಕ ಜನ ದಲ್ಲಾಳಿಗಳು ಸೇರಿಕೊಂಡು ಎಲ್ಲಾ ರೈತರಿಗಿಂತ ಹೆಚ್ಚಿನ ಜಾಗ ಆಕ್ರಮಿಸಿಕೊಂಡು ರೈತರು ಸಮೀಪ ಬರದಂತೆ ತಡೆಯುತ್ತಿದ್ದಾರೆ. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ನಾಮ ನಿರ್ದೇಶಿತ ಸದಸ್ಯರು ಮತ್ತು  ರೈತಪರ ಹೋರಾಟಗಾರರು ಸೇರಿ ರೈತರಿಗೆ ಮೋಸ ಆಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಿದೆ.

ವಿಠಲ.ಆರ್.ಯಂಕಂಚಿ, ಬಮ್ಮನಜೋಗಿ, ರೈತ ಮೋರ್ಚಾ ಪ್ರ.ಕಾ, ದೇವರ ಹಿಪ್ಪರಗಿ




Leave a Reply

Your email address will not be published. Required fields are marked *

error: Content is protected !!