ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಹಾಸನ: ಏನೇ ಸಮಸ್ಯೆ ಇದ್ದರೆ ಕುಳಿತುಕೊಂಡು ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ನಮ್ಮ ತಂದೆ ತಾಯಿಯನ್ನು ಬಾಯಿಗೆ ಬಂದಂತೆ ಬೈದರೆ ನಾನು ಇಮೇಜ್ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ನಟ ಯಶ ಹೇಳಿದ್ದಾರೆ.
ಜಿಲ್ಲೆಯ ತಿಮ್ಮೇನಹಳ್ಳಿಯಲ್ಲಿ ಯಶ ಜಮೀನು ಖರೀದಿ ಮಾಡಿದ್ದಾರೆ. ಜಮೀನಿಗೆ ರಸ್ತೆ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದೆ. ಇದು ದುದ್ದ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಠಾಣೆಗೆ ಭೇಟಿ ನೀಡಿದ ಯಶ, ನಮ್ಮ ತಂದೆ ತಾಯಿಗೆ ಎಲ್ಲಿಗೆ ಬಂದವರು ಅಂತಾರೆ. ನಾವು ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದು. ಹಣ ಮಾಡಬೇಕು ಅಂದಿದ್ರೆ ಬೆಂಗಳೂರಿನಲ್ಲಿಯೇ ಜಮೀನು ತೆಗೆದುಕೊಳ್ತಿದ್ದೆ. ಮಾದರಿ ಕೃಷಿ ಮಾಡಬೇಕು ಎಂದು ಜಮೀನು ಖರೀದಿಸಿದ್ದು ಎಂದು ಹೇಳಿದ್ದಾರೆ.