ಯಶ್ ಫ್ಯಾನ್ಸ್ ಸಾವು, ಕುಟುಂಬಕ್ಕೆ ಪರಿಹಾರ

135

ಪ್ರಜಾಸ್ತ್ರ ಸುದ್ದಿ

ಗದಗ: ನಟ ಯಶ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ಸೊರಣಗಿ ಗ್ರಾಮದಲ್ಲಿ ಅಭಿಮಾನಿಗಳು ಬೃಹತ್ ಕಟೌಟ್ ನಿಲ್ಲಿಸಲು ಹೋಗಿದ್ದಾರೆ. ಈ ವೇಳೆ ವಿದ್ಯುತ್ ತಗುಲಿ ಮೂವರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಯಶ್ ಅಂದು ಗ್ರಾಮಕ್ಕೆ ಬಂದು ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ್ದರು. ಇಂದು ಸಚಿವ ಹೆಚ್.ಕೆ ಪಾಟೀಲ ಮೃತ ಯುವಕರ ಕುಟುಂಬಸ್ಥರನ್ನು ಭೇಟಿಯಾಗಿ 2 ಲಕ್ಷ ರೂಪಾಯಿ ಪರಿಹಾರದ ಚಕ್ ನೀಡಿದರು. ಗಾಯಾಳುಗಳಿಗೆ 50 ಸಾವಿರ ರೂಪಾಯಿ ನೀಡಲಾಯಿತು.

ಮುರುಳಿ, ಹನಮಂತು, ನವೀನ್ ಅನ್ನೋ ಮೂವರು ಯವಕರು ಮೃತಪಟ್ಟಿದ್ದಾರೆ. ಸಚಿವರ ಭೇಟಿ ವೇಳೆ ಭೂ ಒಡೆತನ ಯೋಜನೆ ಅಡಿಯಲ್ಲಿ ಕುಟುಂಬಸ್ಥರು ಭೂಮಿ ನೀಡಲು ಗ್ರಾಮಸ್ಥರು ಮನವಿ ಸಲ್ಲಿಸಿದರು.




Leave a Reply

Your email address will not be published. Required fields are marked *

error: Content is protected !!