ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯ ಜಟಾಪಟಿ ಕೊನೆಯ ಹಂತಕ್ಕೆ ಬಂದಿದೆ. ಇಷ್ಟು ದಿನ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿದ್ದ ನೂತನ ಶಾಸಕರಿಗೆ ಆ ಟೈಂ ಕೂಡಿ ಬಂದಿದ್ದು, ಸೋಮವಾರ ಸಂಪುಟ ಸರ್ಜರಿ ಅಂತಾ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಸಂಬಂಧ ರಾಜಭವನಕ್ಕೆ ಮಾಹಿತಿ ಹೋಗಿದೆಯಂತೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಂದು ಗೆದ್ದಿರುವ 11 ಮಂದಿ ಶಾಸಕರಲ್ಲಿ ಮೊದಲ ಹಂತದಲ್ಲಿ 6 ಜನಕ್ಕೆ ಮಂತ್ರಗಿರಿ ಕೊಡುವುದು. ನಾಲ್ವರು ಮೂಲ ಬಿಜೆಪಿ ಶಾಸಕರಿಗೆ ಸಚಿವ ಪಟ್ಟ. ಉಳಿದ 6 ಖಾತೆಗಳನ್ನ ರಾಜ್ಯ ರಾಜಕೀಯದ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡೋಣ ಅನ್ನೋ ಪ್ರಸ್ತಾವನೆಯನ್ನ ಬಿ.ಎಲ್ ಸಂತೋಷ ಸಿಎಂ ಮುಂದೆ ಇಟ್ಟಿದ್ದಾರೆ. ಆದ್ರೆ, ಸಿಎಂ 11 ಮಂದಿಗೂ ಸಚಿವ ಸ್ಥಾನ ನೀಡೋಣ ಅಂತಾ ಪಟ್ಟು ಹಿಡಿದ್ದಾರೆ. ಯಾಕಂದ್ರೆ ಗೆದ್ದು ಬಂದ 24 ಗಂಟೆಯಲ್ಲಿ ಸಚಿವರನ್ನಾಗಿ ಮಾಡ್ತೀನಿ ಅಂತಾ ಮಾತು ಕೊಟ್ಟಿದ್ದೆ. ಹೀಗಾಗಿ ಅವರಿಗೆ ಗಲ್ಲಲು ಅನುಕೂಲವಾಗಿದೆ ಎಂದು ಸಿಎಂ ಹೇಳಿದ್ದಾರೆ.
ಇಂದು ಸಂಜೆ ಸಿಎಂ ನಿವಾಸದಲ್ಲಿ ಸಭೆ ನಡೆಸಲಾಗ್ತಿದ್ದು ಯಾರಿಗೆ ಸಚಿವ ಸ್ಥಾನ, ಯಾರು 3ನೇ ಹಂತದ ಸರ್ಜರಿ ತನಕ ಕಾಯಬೇಕು. ಯಾರಿಗೆ ಎಂಎಲ್ ಸಿ ಮಾಡುವುದು, ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡುವ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.