ರಾಮ ಮಂದಿರ ಟ್ರಸ್ಟ್ ವಿರುದ್ಧ 16.5 ಕೋಟಿ ಭೂ ಹಗರಣ ಆರೋಪ

232

ಪ್ರಜಾಸ್ತ್ರ ಸುದ್ದಿ

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಕೇಂದ್ರ ಸರ್ಕಾರ ನಿರ್ಮಿಸಿರುವ ಟ್ರಸ್ಟ್ ವಿರುದ್ಧ ಇದೀಗ 16.5 ಕೋಟಿ ರೂಪಾಯಿ ಭೂ ಹಗರಣದ ಆರೋಪ ಕೇಳಿ ಬಂದಿದೆ. ಸಮಾಜವಾದಿ ಪಾರ್ಟಿ ಹಾಗೂ ಆಪ್ ಗಂಭೀರ ಆರೋಪ ಮಾಡಿವೆ.

ಟ್ರಸ್ಟ್ ಇಬ್ಬರು ಡಿಲೀರ್ ಗಳಿಂದ 18.5 ಕೋಟಿ ರೂಪಾಯಿಗೆ ಆಸ್ತಿ ಖರೀದಿಸಲಾಗಿದೆ. ಆದ್ರೆ, ಇದೆ ಆಸ್ತಿಯನ್ನೇ ಕೆಲವೇ ನಿಮಿಷಯಗಳ ಹಿಂದೆ ಈ ಡಿಲೀರ್ ಗಳು 2 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಬಳಿಕ ಟ್ರಸ್ಟ್ 18.5 ಕೋಟಿ ಕೊಟ್ಟು ಖರೀದಿಸುವ ಮೂಲಕ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಉತ್ತರ ಪ್ರದೇಶದ ಮಾಜಿ ಸಚಿವ ಪವನ್ ಪಾಂಡೆ ಹಾಗೂ ಆಪ್ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಪ್ರತ್ಯೇಕ ಪ್ರತಿಕಾಗೋಷ್ಠಿ ನಡೆಸಿ ಕೆಲ ದಾಖಲೆಗಳೊಂದಿಗೆ ಈ ಆರೋಪ ಮಾಡಿದ್ದಾರೆ. ರಾಮನ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಲಾಗ್ತಿದೆ. ಜನರು ನೀಡಿದ ಉಳಿತಾಯದ ಹಣಕ್ಕೆ ನೀವು ನೀಡ್ತಿರುವ ಗೌರವ ಇದೇನಾ ಎಂದು ಪ್ರಶ್ನಿಸಿದ್ದಾರೆ. ಆದ್ರೆ, ಈ ಆರೋಪವನ್ನ ಟ್ರಸ್ಟ್ ನಿರಾಕರಿಸಿದೆ. ಈ ಆರೋಪಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲವೆಂದು ವಿಹೆಚ್ ಪಿ ನಾಯಕ, ಟ್ರಸ್ಟ್ ಕಾರ್ಯದರ್ಶಿ ಪಂಚತ್ ರಾಯ್ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!