ಪ್ರಜಾಸ್ತ್ರ ಸುದ್ದಿ
ನವದೆಹಲಿ: ನಾಳೆ ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ಭೂಮಿ ಪೂಜೆಗೆ ಸಂಬಂಧಿಸಿದಂತೆ ದೇಶ್ಯಾದ್ಯಂತ ಕುತೂಹಲ ಮೂಡಿದೆ. ನಾಳೆ ನಡೆಯುವ ಕಾರ್ಯಕ್ರಮದ ಬಗ್ಗೆ ಅನೇಕರು ಚರ್ಚೆ ನಡೆಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, ಶ್ರೀರಾಮ ಎಲ್ಲರಲ್ಲೂ ಎಲ್ಲರೊಂದಿಗೂ ಇದ್ದಾನೆ ಎಂದಿದ್ದಾರೆ.
ಟ್ವೀಟರ್ ನಲ್ಲಿ ಬರಹವೊಂದು ಪೋಸ್ಟ್ ಮಾಡಿರುವ ಅವರು, ರಾಮ ಸರಳತೆ, ಸಾಹಸ, ಸಂಯಮ, ತ್ಯಾಗ, ವಚನ, ಬದ್ಧತೆ ಆಗಿದ್ದಾನೆ. ರಾಮಾಯಣ ವಿಶ್ವದ ನಾಗರೀಕತೆಯ ಮತ್ತು ಭಾರತೀಯ ಉಪಖಂಡದ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ ಎಂದಿದ್ದಾರೆ.
ರಾಮಾಯಣದ ಕಥೆ ಸಾವಿರಾರು ವರ್ಷಗಳಿಂದ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆನಪುಗಳನ್ನ ಬೆಳಗಿದೆ. ಭಗವಾನ್ ರಾಮ, ಸೀತೆ ಮಾತೆಯ ಸಂದೇಶ ಹಾಗೂ ಕೃಪೆಯೊಂದಿಗೆ ರಾಮಲಲ್ಲಾದಲ್ಲಿ ನಡೆಯುತ್ತಿರುವ ಭೂಮಿ ಪೂಜೆ, ರಾಷ್ಟ್ರೀಯ ಏಕತೆ, ಬಂಧುತ್ವ ಹಾಗೂ ಸಂಸ್ಕೃತಿಕ ಸಮಾಗಮದ ವೇದಿಕೆಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿರುವ ಸುದೀರ್ಘ ಪತ್ರ ಬರೆದು ಕೊನೆಯಲ್ಲಿ ಜೈ ಶ್ರೀರಾಮ ಎಂದಿದ್ದಾರೆ.