ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡ್ ನಲ್ಲಿ ನಡೆದ ಲಖ್ನೋ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ 2ನೇ ಕ್ವಾಲಿಫೈಯರ್ ಗೆ ಎಂಟ್ರಿಯಾಗಿದೆ. ರಜತ್ ಪಟೇದಾರ್ ಭರ್ಜರಿ ಅಜೇಯ 112 ರನ್ ಗಳಿಂದಾಗಿ ಬರೋಬ್ಬರಿ 207 ರನ್ ಗಳಿಸಿದ್ದರು.
ಈ ಗುರಿ ಬೆನ್ನು ಹತ್ತಿದ ಕೆ.ಎಲ್ ರಾಹುಲ್ ಪಡೆ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಾಯಕ ಕೆ.ಎಲ್ ರಾಹುಲ್ ಗಟ್ಟಿಯಾಗಿ ನಿಂತುಕೊಂಡಿದ್ದರು. ಇವರಿಗೆ ದೀಪಕ್ ಹೂಡಾ ಸಾಥ್ ನೀಡಿದ. ಹೀಗಾಗಿ ಗೆಲವನ್ನು ಕೊನೆಯ ಓವರ್ ತನಕ ತೆಗೆದುಕೊಂಡು ಹೋದರು.
ಕೆ.ಎಲ್ ರಾಹುಲ್ 79, ದೀಪಕ್ ಹೂಡಾ 45 ರನ್ ಗಳಿಸಿ ಔಟ್ ಆದರು. ಕುನಾಲ್ ಪಾಂಡ್ಯೆ 0 ರನ್ ಸುತ್ತಿದ್ದರು. ಕೊನೆಗೆ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ 14 ರನ್ ಗಳಿಂದ ಸೋತರು. ಇದರಿಂದಾಗಿ ಆರ್ ಸಿಬಿ ಪಡೆ 2ನೇ ಕ್ವಾಲಿಫೈಯರ್ ಪ್ರವೇಶ ಪಡೆಯಿತು. ಪ್ಲೇಯರ್ ಆಫ್ ದ್ ಮ್ಯಾಚ್ ರಜತ್ ಪಟೇದಾರ್ ಹೊರಹೊಮ್ಮಿದರು. ನಾಳೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿ ಗೆದ್ದರೆ ಫೈನಲ್ ನಲ್ಲಿ ಗುಜರಾತ್ ಜೊತೆಗೆ ಸೆಣಸಾಟ ನಡೆಸಲಿದೆ.