ಪ್ರಜಾಸ್ತ್ರ ಸುದ್ದಿ
ಶಿರಸಿ: ದೇವಸ್ಥಾನಗಳ ವೀಕ್ಷಣೆಗೆ ಹೊರಟಿದ್ದ ಶಾಲಾ ಬಸ್ ವೊಂದು ಪಲ್ಟಿಯಾಗಿದೆ. ಇದರಿಂದಾಗಿ ಒಬ್ಬರ ಸಾವು, 12 ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಬನವಾಸಿ ಹತ್ತಿರ ನಡೆದಿದೆ. ಶಾಲಾ ಸಿಬ್ಬಂದಿ ಕಸ್ತೂರಮ್ಮ(50) ಮೃತಪಟ್ಟಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪರಿಣಿತಿ ವಿದ್ಯಾಮಂದಿರದ ಮಿನಿ ಬಸ್, ಶಿರಿಸಿಯ ಮಾರಿಕಾಂಬ, ಬನವಾಸಿಯ ದೇವಾಲಯಗಳಿಗೆ ಭೇಟಿಗೆ ಹೊರಟಿತ್ತು. ಇದರಲ್ಲಿ ಶಾಲಾ ಸಿಬ್ಬಂದಿ ಇದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.