ಪ್ರಜಾಸ್ತ್ರ ಸುದ್ದಿ
ಮುದ್ದೇಬಿಹಾಳ: ಇಂಡಿಯನ್ ಕ್ರಿಕೆಟ್ ಟೀಂನ ಸ್ಫೋಟಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ಅಭಿಮಾನಿಗಳಿಂದ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಕೊಡೆಕಲ್ಲ ಗ್ರಾಮದಲ್ಲಿ ಸೆಹ್ವಾಗ್ ಜನ್ಮದಿನ ಆಚರಣೆ ಮಾಡಲಾಗಿದೆ.
ನಾಲತವಾಡದಲ್ಲಿರುವ ಶ್ರೀದಾವಲಮಲಿಕ ಅನಾಥಾಶ್ರಮದಲ್ಲಿ ವೀರೇಂದ್ರ ಸೆಹ್ವಾಗ್, 42ನೇ ವರ್ಷದ ಹುಟ್ಟು ಹಬ್ಬವನ್ನ ಸರಳವಾಗಿ ಆಚರಿಸಲಾಯ್ತು. ಪಠ್ಯ ಪುಸ್ತಕ ಮತ್ತು ಹಣ್ಣು ಹಂಪಲುಗಳನ್ನ ಮಕ್ಕಳಿಗೆ ಸೆಹ್ವಾಗ್ ಅಭಿಮಾನಿಗಳು ವಿತರಿಸುವ ಮೂಲಕ ಕೋವಿಡ್ 19 ನಿಯಮಗಳನ್ನ ಪಾಲಿಸಲಾಯ್ತು.