ನಾಲತವಾಡದಲ್ಲಿ ಬ್ಯಾಂಕ್ ಗೆ ಕನ್ನ ಹಾಕಿದ ಖದೀಮರು

383

ವಿಜಯಪುರ: ಬ್ಯಾಂಕಿನ ಹಿಂಬದಿಯ ಗೋಡೆ ಒಡೆದು ಕಳ್ಳತನ ಮಾಡಲಾಗಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಬ್ಯಾಂಕ್ ಕಳ್ಳತನ ಪ್ರಕರಣ ನಡೆದಿದೆ.

ಪಟ್ಟಣದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನ ಹಿಂಬದಿಯ ಗೋಡೆಯನ್ನ ಕೊರೆದು ಕಳ್ಳತನ ಮಾಡಲಾಗಿದೆ. ಈ ವೇಳೆ ಬ್ಯಾಂಕ್ ನಲ್ಲಿರುವ ಮಹತ್ವದ ಕಾಗದ ಪತ್ರಗಳನ್ನ ತೆಗೆದುಕೊಂಡ ಖದೀಮರು ಗುಂಡಿಯಲ್ಲಿ ಬಿಸಾಕಿದ್ದಾರೆ. ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಕಳ್ಳತನ ಪ್ರಕರಣದಿಂದಾಗಿ ಬ್ಯಾಂಕಿನಲ್ಲಿ ಹಣ ಹಾಗೂ ಗ್ರಾಹಕರ ಕಾಗದ ಪತ್ರಕ್ಕೆ ಪರದಾಟ ಶುರುವಾಗಿದೆ. ಎಷ್ಟು ಕಳ್ಳತನವಾಗಿದೆ ಅನ್ನೋದರ ಸ್ಪಷ್ಟ ಮಾಹಿತಿ ಇನ್ನು ಸಿಕ್ಕಿಲ್ಲ. ಸ್ಥಳಕ್ಕೆ ಮುದ್ದೇಬಿಹಾಳ ಸಿಪಿಐ  ಆನಂದ ವಾಘ್ಮೋರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಸಂದರ್ಭದಲ್ಲಿ ನಾಲತವಾಡದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಸ್ಥಳೀಯರು ಆಗ್ರಹಿಸಿದ್ರು.




Leave a Reply

Your email address will not be published. Required fields are marked *

error: Content is protected !!