ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಧರ್ಮಸ್ಥಳದ ಸೌಜನ್ಯಳ ಅತ್ಯಾಚಾರ, ಹತ್ಯೆ ಮಾಡಿದ ಪ್ರಕರಣದ ಮರುತನಿಖೆಗೆ ಎಲ್ಲಡೆಯಿಂದ ಒತ್ತಾಯ ಕೇಳಿ ಬರುತ್ತಿದೆ. ಈ ಪ್ರಕರಣ ಸಂಬಂಧ ಸ್ಯಾಂಡಲ್ ವುಡ್ ಸ್ಟಾರ್ ನಟ ದುನಿಯಾ ವಿಜಯ್ ಧ್ವನಿ ಎತ್ತಿದ್ದಾರೆ.
ಈ ಬಗ್ಗೆ ನಟ ದುನಿಯಾ ವಿಜಯ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು, ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು.-ಬುದ್ಧ ಅಂತಾ ಬರೆದಿದ್ದಾರೆ.
ನಟ ದುನಿಯಾ ವಿಜಯ್ ಈ ನಡೆಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಲ್ಲರೂ ಇದೆ ರೀತಿ ಧ್ವನಿ ಎತ್ತಿದರೆ ನಿಜವಾದ ಅಪರಾಧಿಗಳು ಯಾರು ಅನ್ನೋದು ಹೊರ ಬರಲಿದೆ ಅಂತಾ ಹೇಳಲಾಗುತ್ತಿದೆ. 11 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಲಾಗಿತ್ತು. ಸಿಬಿಐ ಆತನನ್ನು ದೋಷಮುಕ್ತ ಎಂದು ತೀರ್ಪು ನೀಡಿದೆ. ಮಾಡದ ತಪ್ಪಿಗೆ ತನ್ನ ಬದುಕು, ತಾಯಿಯನ್ನು ಕಳೆದುಕೊಂಡ ಸಂತೋಷ್ ರಾವ್ ಗೆ ನ್ಯಾಯ ಕೊಡುವುದು ಯಾರು? ನಿಜವಾದ ಅಪರಾಧಿಗಳು ಯಾರು? ಅನ್ನೋ ದೊಡ್ಡ ಚರ್ಚೆ ನಡೆದಿದೆ.