ಚಾಮರಾಜನಗರ: ನಾಡಿನಲ್ಲಿ ಪ್ರವಾಹ ಉಂಟಾಗಿ ಜನರ ಜೀವನ ಸಂಪೂರ್ಣ ಹದಗೆಟ್ಟು ಹೋಗಿರುವ ಟೈಂನಲ್ಲಿ ಅದ್ಧೂರಿ ದಸರಾ ಮಾಡ್ತಿರುವುದಕ್ಕೆ ಸಂಸದ ಶ್ರೀನಿವಾಸ ಪ್ರಸಾದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಳ್ಳೆಗಾಲದಲ್ಲಿ ಇಂದು ಮಾತ್ನಾಡಿದ ಅವರು, ರಾಜ್ಯದಲ್ಲಿ ಇಷ್ಟೊಂದು ಪ್ರವಾಹ ಪರಿಸ್ಥಿತಿ ಉಂಟಾಗಿರುವಾಗ ಅದ್ಧೂರಿ ದಸರಾ ಬೇಕಾಗಿರ್ಲಿಲ್ಲ. ಆಹಾರ ಮೇಳ ಮಾಡಿ ತಿನ್ನುವುದು. ಯುವ ದಸರಾ ಮಾಡಿ ಕುಣಿಯುವುದು ದಸರಾ ಅಲ್ಲ ಅಂತಾ ಹೇಳಿದ್ದಾರೆ.
ಸರಳವಾಗಿ ದಸರಾ ಆಚರಿಸಿ ಎಂದು ನಾನು ಹೇಳಿದ್ದೆ. ಸಚಿವರು ಕೇಳಿಲ್ಲ. ನನ್ನನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಾನು ಸಹ ಜನಪ್ರತಿನಿಧಿ. ಆದ್ರೆ, ನಾನು ದಸರಾ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ ಅಂತಾ ತಿಳಿಸುವ ಮೂಲಕ, ಅದ್ಧೂರಿ ದಸರಾ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.