ಎಸ್ಎಸ್ಎಲ್ ಸಿ ಪರೀಕ್ಷೆಗೆ ಗಮ್ಮಟನಗರಿ ಸಜ್ಜು: ಜಿಲ್ಲಾಧಿಕಾರಿ ಹೇಳಿದ್ದೇನು?

309

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜೂನ್ 25ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಶುರುವಾಗ್ತಿದ್ದು, ಗುಮ್ಮಟನಗರಿ ಸಜ್ಜಾಗಿದೆ. ಈ ಬಗ್ಗೆ ಮಾತ್ನಾಡಿರುವ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲೆಯಲ್ಲಿ 37, 122 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇದಕ್ಕಾಗಿ 121 ಪರೀಕ್ಷೆ ಕೇಂದ್ರಗಳು ಸಜ್ಜಾಗಿವೆ. ಒಂದೂವರೆ ಗಂಟೆ ಮೊದ್ಲೇ ವಿದ್ಯಾರ್ಥಿಗಳು ಹಾಜರಿರಬೇಕು ಎಂದಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಕಂಟೇನ್ಮೇಂಟ್ ಝೋನ್ ಪ್ರದೇಶದ 103 ವಿದ್ಯಾರ್ಥಿಗಳು ನಾಳೆ ಪರಿಕ್ಷೆಗೆ ಹಾಜರಾಗಲಿದ್ದು, ಆ 103 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಕಂಟೇನ್ಮೇಂಟ್ ಝೋನ್ ಪ್ರದೇಶದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆ ಬರೆಯುತ್ತೇವೆ ಎಂದರೆ ಅವರಿಗೆ ಅವಕಾಶ ನೀಡಲಾಗುವುದು. ಅಲ್ಲದೇ, ಅವರಿಗೆ ಪ್ರಥಮ ಪರೀಕ್ಷೆ ಎಂದೇ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!