ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಕೈಗಾರಿಕೆ ಸೌಲಭ್ಯ ತಿದ್ದುಪಡಿ ಕಾಯ್ದೆಗೆ ಅನುಮೋದನೆ, ಎಲೆಕ್ಟ್ರಿಕಲ್ ವೆಹಿಕಲ್ ತಯಾರಿಕೆಗೆ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.
ರಾಜ್ಯ ಕೈಗಾರಿಕೆ ಸೌಲಭ್ಯ ಅಧಿನಿಯಮ 2020ಕ್ಕೆ ತಿದ್ದುಪಡಿ
ಎಲೆಕ್ಟ್ರಿಕಲ್ ವೆಹಿಕಲ್ ತಯಾರಿಕೆಗೆ ವಿನಾಯಿತಿ
ಕೈಗಾರಿಕೆಯಲ್ಲಿ ಅಭಿವೃದ್ಧಿ ಸಾಧಿಸಲು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆ ಜಾರಿ
ಜಿಲ್ಲಾ ಸಮಿತಿಯಲ್ಲಿ ಕ್ಲಿಯರೆನ್ಸ್ ನೀಡಿದ್ರೆ ಕೈಗಾರಿಕೆ ಸ್ಥಾಪನೆಗೆ ಅನುಮತಿ
ಅನುಮತಿ ನೀಡಿದ 3 ವರ್ಷದವರೆಗೆ ಕೈಗಾರಿಕೆ ಸ್ಥಾಪನೆಗೆ ಟೈಂ ಇರುತ್ತೆ
9.74 ಲಕ್ಷ ಮನೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್
ಮನೆ ನಿರ್ಮಾಣಕ್ಕೆ 10.194 ಕೋಟಿ ಹಣ ಬಿಡುಗಡೆ
2012ರಿಂದ ಇಲ್ಲಿಯ ತನಕ ಬಾಕಿಯಿರುವ ಮನೆ ನಿರ್ಮಾಣಕ್ಕೆ ಒಪ್ಪಿಗೆ
ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಸಂಬಳದಲ್ಲಿ ಶೇಕಡ 30ರಷ್ಟು ಕಡಿತ
ವೇತನ ಕಡಿತಗೊಳಿಸಲು ಕಾಯ್ದೆ ತಿದ್ದುಪಡಿ