ಸಚಿವ ಸಂಪುಟ ಸಭೆಯ ಹೈಲೈಟ್ಸ್

325

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿದೆ. ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಕೈಗಾರಿಕೆ ಸೌಲಭ್ಯ ತಿದ್ದುಪಡಿ ಕಾಯ್ದೆಗೆ ಅನುಮೋದನೆ, ಎಲೆಕ್ಟ್ರಿಕಲ್ ವೆಹಿಕಲ್ ತಯಾರಿಕೆಗೆ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.

ರಾಜ್ಯ ಕೈಗಾರಿಕೆ ಸೌಲಭ್ಯ ಅಧಿನಿಯಮ 2020ಕ್ಕೆ ತಿದ್ದುಪಡಿ

ಎಲೆಕ್ಟ್ರಿಕಲ್ ವೆಹಿಕಲ್ ತಯಾರಿಕೆಗೆ ವಿನಾಯಿತಿ

ಕೈಗಾರಿಕೆಯಲ್ಲಿ ಅಭಿವೃದ್ಧಿ ಸಾಧಿಸಲು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆ ಜಾರಿ

ಜಿಲ್ಲಾ ಸಮಿತಿಯಲ್ಲಿ ಕ್ಲಿಯರೆನ್ಸ್ ನೀಡಿದ್ರೆ ಕೈಗಾರಿಕೆ ಸ್ಥಾಪನೆಗೆ ಅನುಮತಿ

ಅನುಮತಿ ನೀಡಿದ 3 ವರ್ಷದವರೆಗೆ ಕೈಗಾರಿಕೆ ಸ್ಥಾಪನೆಗೆ ಟೈಂ ಇರುತ್ತೆ

9.74 ಲಕ್ಷ ಮನೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

ಮನೆ ನಿರ್ಮಾಣಕ್ಕೆ 10.194 ಕೋಟಿ ಹಣ ಬಿಡುಗಡೆ

2012ರಿಂದ ಇಲ್ಲಿಯ ತನಕ ಬಾಕಿಯಿರುವ ಮನೆ ನಿರ್ಮಾಣಕ್ಕೆ ಒಪ್ಪಿಗೆ

ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಸಂಬಳದಲ್ಲಿ ಶೇಕಡ 30ರಷ್ಟು ಕಡಿತ

ವೇತನ ಕಡಿತಗೊಳಿಸಲು ಕಾಯ್ದೆ ತಿದ್ದುಪಡಿ




Leave a Reply

Your email address will not be published. Required fields are marked *

error: Content is protected !!