ಪ್ರಜಾಸ್ತ್ರ ಸುದ್ದಿ
ನವದೆಹಲಿ: ಸಂಸತ್ತಿನಲ್ಲಿ ಅಂಗೀಕರಿಸಲಾದ ಗೊತ್ತುವಳಿ ಬಳಿಕ ಅಮಾನತುಗೊಂಡಿದ್ದ ನಾಲ್ವರು ಕಾಂಗ್ರೆಸ್ ಸದಸ್ಯರ ಆದೇಶ ರದ್ದು ಪಡಿಸಲಾಗಿದೆ. ಮಳೆಗಾಲದ ಇಡೀ ಅಧಿವೇಶನದಿಂದ ಅಮಾನತು ಮಾಡಲಾಗಿತ್ತು. ಇದೀಗ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.
ಬೆಲೆ ಏರಿಕೆ ಖಂಡಿಸಿ ಕಲಾಪದಲ್ಲಿ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಕಲಾಪಕ್ಕೆ ಅಡ್ಡಿಪಡಿಸಿದ್ದರು ಹಾಗೂ ಸದನದಲ್ಲಿ ಭಿತ್ತಿ ಪತ್ರಗಳು ಹಿಡಿಯಲು ಅವಕಾಶವಿಲ್ಲವೆಂದು ಹೇಳಿ ಸ್ಪೀಕರ್ ಅವರು ಲೋಕಸಭೆ ಅಧಿವೇಶನ ಮುಗಿಯುವ ತನಕ ಅಮಾನತುಗೊಳಿಸಿದ್ದರು.