ಜೈಪುರ್ : ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಹತ್ಯೆಗೆ ಪ್ಲಾನ್ ಗಳು ನಡೆದಿವೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸ್ಫೋಟಕ ಮಾಹಿತಿಯೊಂದು ಹೊರ ಬಿದ್ದಿದೆ. ಮೋದಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದ್ಲೇ ಅವರನ್ನ ಹತ್ಯೆ ಮಾಡುವುದಾಗಿ ಪತ್ರವೊಂದು ಬಂದಿದ್ದ ವಿಷ್ಯ ತಡವಾಗಿ ಬೆಳಕಿಗೆ ಬಂದಿದೆ.
ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಮದನ್ ಲಾಲ್ ಸೇನಿ ಅವರಿಗೆ ಪತ್ರವೊಂದು ಬಂದಿದ್ದು, ಅದರಲ್ಲಿ ಪ್ರಧಾನಿ ಮೋದಿಯನ್ನ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬರೆಯಲಾಗಿದೆ. ಇದನ್ನ ಸೇನಿ ಅವರು ಪೊಲೀಸರಿಗೆ ತಕ್ಷಣ ನೀಡಿದ್ರಂತೆ. ಈ ವಿಷ್ಯ ಇದೀಗ ಬೆಳಕಿಗೆ ಬಂದಿದೆ.
ಪೊಲೀಸ್ರು ಇದೊಂದು ಕಿಡಿಗೇಡಿಗಳ ಕೃತ್ಯ. ಪತ್ರ ಎಲ್ಲಿಂದ ಬಂದಿದೆ ಅನ್ನೋದಕ್ಕೆ ಯಾವುದೇ ಅಡ್ರೆಸ್ ಇಲ್ಲ ಎಂದಿದ್ದಾರೆ. ಈ ಹಿಂದೆ ರಾಜಸ್ಥಾನದಲ್ಲಿ ಇಂತಹದ್ದೆ ವರದಿಯಾಗಿತ್ತು. ಹರಿಯಾಣದ ರೇವಾರಿ ನಿವಾಸಿ ನವೀನ್ ಕುಮಾರ್ ಯಾದವ್ ಎಂಬಾತ್ ತನ್ನ ಫೇಸ್ ಬುಕ್ ನಲ್ಲಿ, ಮೋದಿ ಹತ್ಯೆ ಮಾಡಲು ಯಾರು ಗುತ್ತಿಗೆ ಕೊಡ್ತೀರಿ. ನನ್ನ ಬಳಿ ಪಕ್ಕಾ ಪ್ಲಾನ್ ಇದೆ ಅಂತಾ ಬರೆದುಕೊಂಡಿದ್ದ. ಬಳಿಕ ಆತನನ್ನ ಬಂಧಿಸಲಾಯ್ತು.