ಅರಣ್ಯ ಅಧಿಕಾರಿ ಬಂಧನ

268

ಪ್ರಜಾಸ್ತ್ರ ಸುದ್ದಿ

ಚಿಕ್ಕಮಗಳೂರು: ರಾಜ್ಯದಲ್ಲಿ ಸಧ್ಯ ಚರ್ಚೆಯಲ್ಲಿರುವುದು ಹುಲಿ ಉಗುರು ಪೆಂಡೆಂಟ್ ಮಾತ್ರ. ಚಿತ್ರ ನಟರು, ನಿರ್ಮಾಕರು, ರಾಜಕೀಯ ನಾಯಕರ ಮಕ್ಕಳು, ಜೋತಿಷಿಗಳು, ಸ್ವಾಮೀಜಿಗಳ ಫೋಟೋಗಳು ವೈರಲ್ ಆಗುತ್ತಿವೆ. ಇದರ ನಡುವೆ ಸ್ವತಃ ಅರಣ್ಯ ಅಧಿಕಾರಿಯೇ ಇದೀಗ ಬಂಧನಕ್ಕೆ ಒಳಗಾಗಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿ ದರ್ಶನ್, ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿರುವ ಫೋಟೋ ವೈರಲ್ ಆಗಿತ್ತು. ಹೀಗಾಗಿ ಅವರನ್ನು ಸೆಸ್ಪೆಂಡ್ ಮಾಡಲಾಯಿತು. ಇದರ ಬೆನ್ನಲ್ಲೇ ಆಲ್ದೂರು ಅರಣ್ಯ ಇಲಾಖೆ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಅರೆನೂರು ಗ್ರಾಮದ ಸುಪ್ರಿತ್ ಹಾಗೂ ಅಬ್ದುಲ್ ಎಂಬುವರು ಡಿಆರ್ ಎಫ್ಓ ದರ್ಶನ್ ವಿರುದ್ಧ ದೂರು ಸಲ್ಲಿಸಿದ್ದರು.




Leave a Reply

Your email address will not be published. Required fields are marked *

error: Content is protected !!